ಗಣೇಶ ಕೂರಿಸಿದ ಮೇಲೆ ಇವನ್ನು ಮರೆಯಬೇಡಿ
ಬೆಂಗಳೂರು,
ಆ,
20
:
ಮಹಾನಗರದಲ್ಲಿ
ಗೌರಿ-ಗಣೇಶ
ಹಬ್ಬದ
ಸಂಭ್ರಮ
ಮನೆ
ಮಾಡಿದೆ.
ನಗರದ
ಲಕ್ಷಾಂತರ
ಮನೆಗಳಲ್ಲಿ,
ಬೀದಿ
ಬೀದಿಗಳಲ್ಲಿ
ಗಣಪತಿ
ಪ್ರತಿಷ್ಠಾಪನೆಯಾಗಿದೆ.
ಹಬ್ಬ
ಆಚರಣೆಗೆ
ಸಂಬಂಧಿಸಿ
ಪೊಲೀಸ್
ಇಲಾಖೆ
ಸಾರ್ವಜನಿಕರಿಗೆ
ಅನೇಕ
ಸೂಚನೆ
ನೀಡಿದ್ದು
ಕಟ್ಟುನಿಟ್ಟಾಗಿ
ಪಾಲಿಸಲು
ತಿಳಿಸಿದೆ.
ಪಾಲಿಸಬೇಕಾದ ಆದೇಶಗಳು ಇಂತಿವೆ:
* ಗಣೇಶ ಸ್ಥಾಪನೆ ಮಾಡಿದ ಜಾಗದಲ್ಲಿ ಕನಿಷ್ಠ ಇಬ್ಬರು ಕಾರ್ಯಕರ್ತರು ಯಾವಾಗಲೂ ಹಾಜರಿರಬೇಕು.
* ಮೂರ್ತಿ ಪ್ರತಿಷ್ಠಾಪಿಸುವ ಜಾಗದಲ್ಲಿ ಬೆಂಕಿ ನಂದಿಸುವ ಸಾಮಗ್ರಿ ಅಳವಡಿಸಿರಬೇಕು.
* ಸುತ್ತಮುತ್ತಲ ಜಾಗದಲ್ಲಿ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇಡುವುದು ನಿಷಿದ್ಧ.
* ವಿದ್ಯುತ್ ಸಂಪರ್ಕ ಪಡೆಯಲು ಬೆಸ್ಕಾಂ ಅನುಮತಿ ಪಡೆದಿರಬೇಕು.
* ದಿನದ 24 ಗಂಟೆಯೂ ಮೂರ್ತಿ ಸ್ಥಾಪನೆ ಜಾಗದಲ್ಲಿ ಬೆಳಕಿರಬೇಕು.
* ಜನಸಂದಣಿ ನಿಯಂತ್ರಿಸಲು ಸಮರ್ಪಕ ರೀತಿಯಲ್ಲಿ ಬ್ಯಾರಿಕೇಡ್ ಅಳವಡಿಸುವುದು ಆಯೋಜಕರ ಜವಾಬ್ದಾರಿ.
* ಮಹಿಳಾ ಸುರಕ್ಷತೆಗೆ ಭಂಗ ತರದಂತೆ ನಡೆದುಕೊಳ್ಳುವುದು.
* ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಬಳಸಬೇಕು.
* ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇಳೆ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು.
* ಸಮಿತಿಯವರು ಕಡ್ಡಾಯವಾಗಿ ಸಮವಸ್ತ್ರ ಬಳಸಬೇಕು.
Comments
English summary
The State Government has appealed to the people to celebrate Ganesh Chaturthi in an eco-friendly way by opting for unpainted idols. Also the Bangalore police have issued a list of guidelines for people to observe during the festival.