ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

430 ಕಿಮೀ ಸಾಗಿ ಕ್ಯಾನ್ಸರ್ ರೋಗಿಗೆ ನೆರವಾದ ಕಾನ್ಸ್‌ಸ್ಟೇಬಲ್‌ಗೆ ಸೆಲ್ಯೂಟ್

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಲಾಕ್‌ಡೌನ್‌ನಿಂದ ಅನೇಕರಿಗೆ ತೊಂದರೆಯಾಗಿರುವುದು ನಿಜ. ಈ ರೀತಿ ಧಾರವಾಡದಲ್ಲಿ ಕ್ಯಾನ್ಸರ್ ರೋಗಿಯೊಬ್ಬರು ಔಷಧ ಸಿಗದೆ ಪರಾದಾಡುತ್ತಿದ್ದರು. ತೊಂದರೆಯಲ್ಲಿದ್ದ ಅವರಿಗೆ ಹೆಡ್ ಕಾನ್ಸ್‌ಸ್ಟೇಬಲ್ ಕುಮಾರಸ್ವಾಮಿ ನೆರವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಎಸ್‌ ಕುಮಾರಸ್ವಾಮಿ, ಧಾರವಾಡದ ಕ್ಯಾನ್ಸರ್ ರೋಗಿಗೆ ನೆರವಾಗಿದ್ದಾರೆ. ಔಷಧಿಯನ್ನು ಕೊಂಡುಕೊಂಡು, ಬೆಂಗಳೂರಿನಿಂದ ಬೈಕ್‌ನಲ್ಲಿ ಒಬ್ಬರೆ 430 ಕಿಮೀ ಪ್ರಯಾಣ ಮಾಡಿ ರೋಗಿಗೆ ಔಷಧವನ್ನು ತಲುಪಿಸಿದ್ದಾರೆ.

ಲಾಕ್‌ಡೌನ್ ನಿಯಮ ಮುರಿದಿದ್ದಕ್ಕೆ ಬಂಧನ: ಮಹಿಳೆಯ ಬೆತ್ತಲೆ ಪ್ರತಿಭಟನೆ ಲಾಕ್‌ಡೌನ್ ನಿಯಮ ಮುರಿದಿದ್ದಕ್ಕೆ ಬಂಧನ: ಮಹಿಳೆಯ ಬೆತ್ತಲೆ ಪ್ರತಿಭಟನೆ

ಹೆಡ್ ಕಾನ್ಸ್‌ಸ್ಟೇಬಲ್ ಕುಮಾರಸ್ವಾಮಿ ಕಾರ್ಯವನ್ನು ಪೊಲೀಸ್ ಇಲಾಖೆ ಮೆಚ್ಚಿಕೊಂಡಿದೆ. ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಡ್ ಕಾನ್ಸ್‌ಸ್ಟೇಬಲ್ ಕುಮಾರಸ್ವಾಮಿ ಅವರನ್ನು ತಮ್ಮ ಕಛೇರಿಗೆ ಕರೆಸಿ ಮೆಚ್ಚುಗೆ ಮಾತುಗಳನ್ನು ಆಡಿ, ಗೌರವಿಸಿದ್ದಾರೆ.

Bangalore City Police Appreciated Head Constable S Kumaraswamy

ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದು, ಕುಮಾರಸ್ವಾಮಿ ಹಾಗೂ ಭಾಸ್ಕರ್ ರಾವ್ ಭೇಟಿಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ರೋಗಿಗೆ ಸಹಾಯ ಮಾಡಿದ ಕುಮಾರಸ್ವಾಮಿರಿಗೆ ಸೆಲ್ಯೂಟ್ ಹೊಡೆದಿದ್ದಾರೆ.

ಸಾವಿರಾರು ಜನರು ಕುಮಾರಸ್ವಾಮಿ ರವರ ಪೊಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದರೆ. ಇದರಲ್ಲಿ ಹಲವರು ಈ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮ ಕಷ್ಟದ ಪರಿಸ್ಥಿತಿಯನ್ನು ತಿಳಿಸಿದ್ದಾರೆ.

English summary
Bangalore city police appreciated head constable S Kumaraswamy. who travelled solo on bike from Bengaluru to Dharawad traversing 430 kms to provide life saving medication for a cancer patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X