ಮೋದಿಗೂ ಮೊರೆಯಿಟ್ಟ ಅರ್ಕಾವತಿ ನಿವೇಶನದಾರರು!
ಬೆಂಗಳೂರು, ಜೂನ್ 5: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಅಹವಾಲೊಂದು ನೂತನ ಪ್ರಧಾನಿ ನರೆಂದ್ರ ಮೋದಿ ಅವರನ್ನು ತಲುಪಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಪಡೆದವರು ಅನ್ಯ ಮಾರ್ಗ ಕಾಣದೆ ನೇರವಾಗಿ ದೇಶದ ಪ್ರಧಾನ ಮಂತ್ರಿಗೇ ಮೊರೆಯಿಟ್ಟಿದ್ದಾರೆ.
'ಕಳೆದ
8
ವರ್ಷಗಳ
ಹಿಂದೆಯೇ
ತಮಗೆ
ನಿವೇಶನ
ಹಂಚಿಕೆಯಾಗಿದ್ದರೂ
ಅದನ್ನು
ತಮ್ಮ
ಸ್ವಾಧೀನಕ್ಕೆ
ಪಡೆಯಲು
ಸಾಧ್ಯವಾಗಿಲ್ಲ.
ಬಡಾವಣೆಯ
ಭೂಮಿಯು
ಡಿನೋಟಿಫಿಕೇಶನ್
ಬಲೆಯಲ್ಲಿ
ಸಿಕ್ಕಿಹಾಕಿಕೊಂಡಿದೆ.
ಬಡಾವಣೆ
ರಚಿಸಲು
ಬಿಡಿಎ
ವಿಳಂಬ
ಧೋರಣೆ
ಅನುಸರಿಸುತ್ತಿದೆ.
ಇದು
ನಿವೇಶನ
ಹಂಚಿಕೆಯಾಗಿರುವ
8813
ಮಂದಿಯ
ದುಃಸ್ಥಿತಿ.
ಇವರ
ಪೈಕಿ
200
ಮಂದಿ
ತಮ್ಮ
ಕನಸಿನ
ಸೂರು
ಕಟ್ಟಿಕೊಳ್ಳುವ
ಮುನ್ನವೇ
ಅಸುನೀಗಿದ್ದಾರೆ'
ಎಂದು
ಅರ್ಕಾವತಿ
ಬಡಾವಣೆ
ನಿವೇಶನದಾರರ
ಒಕ್ಕೂಟವು
ತಮ್ಮ
ಪಡಿಪಾಟಲು/
ವಾಸ್ತವತೆಯನ್ನು
ಪ್ರಧಾನಿಯ
ಗಮನಕ್ಕೆ
ತಂದಿದ್ದಾರೆ.
ದೇಶದಲ್ಲಿ ಇದೊಂದೇ ಬಡಾವಣೆ ಎಲ್ಲ ಕೋರ್ಟು, ಕಚೇರಿಗಳನ್ನು ಕಂಡಿರುವುದು. ಎಲ್ಲ ಕಡೆಯೂ ನಮ್ಮ ಅಹವಾಲಿಗೆ ಮಾನ್ಯತೆ ಸಿಕ್ಕಿದೆ. ಆದರೂ ಸ್ಥಳೀಯ ಆಡಳಿತ ಬಡಾವಣೆಯನ್ನು ರಚಿಸಿ, ನಮಗೆ ಇನ್ನೂ ನಿವೇಶನ ಹಂಚಿಕೆ ಮಾಡಿಲ್ಲ. ನಮಗಿನ್ನೂ ನ್ಯಾಯ ದಕ್ಕಿಲ್ಲ. ಕೊನೆಗೆ Write of Mandamus ಅನುಸಾರ ಕರ್ನಾಟಕ ಹೈಕೋರ್ಟಿಗೂ ಮೊರೆ ಹೋಗಿದ್ದೇವೆ. ಮಾರ್ಚ್ 31ಕ್ಕೆ ಈ ಬಗ್ಗೆ ನಿರ್ಣಯ ಹೊರಬೀಳಬೇಕಿತ್ತು. ಆದರೆ ಇದುವರೆಗೂ ಏನೂ ಆಗಿಲ್ಲ. (ಅರ್ಕಾವತಿ ಲೇಔಟ್ ಗೆ ಭಾರಿ ವಿರೋಧ, ಪ್ರತಿಭಟನೆ)
ಅಂತಿಮವಾಗಿ ಅನ್ಯ ಮಾರ್ಗ ಕಾಣದೆ ಸಾಮಾಜಿಕ ಜಾಲತಾಣದ ಮೂಲಕ ನಮ್ಮ ದುಸ್ಥಿತಿ ನಿಮ್ಮ ಗಮನಕ್ಕೆ ಬರುವುದೆಂಬ ಆಶಯದೊಂದಿಗೆ ನಿಮ್ಮ ಮುಂದಿಡುತ್ತಿದ್ದೇವೆ. ಪ್ರಧಾನಿ ಕಾರ್ಯಾಲಯ ನಮ್ಮ ಮನವಿಗೆ ಸ್ಪಂದಿಸಿ, ನಮಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುತ್ತದೆ ಎಂಬ ಆಶಯ ನಮ್ಮದಾಗಿದೆ ಎಂದು Facebook post ಹೇಳುತ್ತಿದೆ.