ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಬಾಬಾ ರಾಮ್ದೇವ್ ಆಗ್ರಹ
ಬೆಂಗಳೂರು, ಜನವರಿ 22: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಬೆನ್ನಲ್ಲೇ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ಕೂಗು ಜೋರಾಗಿದೆ. ಇದರ ಮಧ್ಯೆ ಯೋಗ ಗುರು ಬಾಬಾ ರಾಮ್ದೇವ್ ಸಹ ಧ್ವನಿಗೂಡಿಸಿದ್ದಾರೆ.
ಸಿದ್ದಗಂಗಾ LIVE: ವಾರಣಾಸಿಯಲ್ಲಿ ಶ್ರೀಗಳನ್ನು ನೆನೆದ ಮೋದಿ
ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನ ಪಡೆಯುವ ಸಲುವಾಗಿ ಬೆಂಗಳೂರಿನ ಆಗಮಿಸಿದ ಬಾಬಾ ರಾಮ್ದೇವ್ ಏರ್ಪೋರ್ಟ್ನಲ್ಲಿ ಈ ಕುರಿತು ಮಾತನಾಡಿ, ಭಾರತ ರತ್ನವನ್ನು ಶ್ರೀಗಳಿಗೆ ನೀಡಿದರೆ ಪ್ರಶ್ತಿಯ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಿದ್ದಗಂಗಾ ಶ್ರೀ ಶಿವೈಕ್ಯ ಹಿನ್ನೆಲೆ:ಇಂದು ಅರಮನೆಗೆ ಪ್ರವೇಶವಿಲ್ಲ
ಭಾರತ ರತ್ನ ಪ್ರಶಸ್ತಿಯನ್ನು ಕ್ರೀಡೆ, ಸಂಗೀತ, ರಾಜಕೀಯ ವ್ಯಕ್ತಿಗಳಿಗೆ ನೀಡಬಹುದಾದರೆ ತ್ರಿವಿಧ ದಾಸೋಹಿಗೆ ಯಾಕೆ ನೀಡಿ ಗೌರವಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
111 ವರ್ಷಗಳ ಕಾಲ ಸುದೀರ್ಘ ಬಾಳಿದ್ದ ಶಿವಕುಮಾರ ಸ್ವಾಮೀಜಿಗಳು ಸೋಮವಾರ ಬೆಳ್ಳಗೆ 11.44ರ ಸುಮಾರಿಗೆ ಲಿಂಗೈಕ್ಯರಾಗಿದ್ದರು. ಈ ಹಿನ್ನಲೆಯಲ್ಲಿ ಅವರ ಅಂತಿಮ ದರ್ಶನಕ್ಕೆ ಹಣಿ ಮಾಡಲಾಗಿದ್ದು ಲಕ್ಷಾಂತರ ಮಂದಿ ಭಕ್ತರು ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ: ಲೀಲಾವತಿ
ಶ್ರೀಗಳು ಬದುಕಿರುವಾಗಲೇ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಕೂಡ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದ್ದರು. ರಾಷ್ಟ್ರಪತಿ ಹಾಗೂ ಪ್ರಧಾನಿ ಬಳಿ ಖುದ್ದಾಗಿ ಮನವಿ ಮಾಡುವುದಾಗಿಯೂ ತಿಳಿಸಿದ್ದರು.