ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಮುಂದೆ ಮತ್ತೊಮ್ಮೆ ಬರಲಿದೆ ವಾಲಿವಧೆ: ನೋಡಿ ಬನ್ನಿ

By Nayana
|
Google Oneindia Kannada News

ಬೆಂಗಳೂರು, ಮೇ 10: ಅವಿರತ ಪ್ರತಿಷ್ಠಾನವು ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿ ಆಧಾರಿತ ವಾಲಿವಧೆ ನಾಟಕವನ್ನು ಮೇ 19ರಂದು ಸಂಜೆ 5.30ಕ್ಕೆ ಚೌಡಯ್ಯ ಮೆಮೊರಿಯಲ್‌ಹಾಲ್‌ನಲ್ಲಿ ಆಯೋಜಿಸಿದೆ.

ಈ ಶತಮಾನದ ಮೇರು ಕೃತಿಗಳಲ್ಲಿ ಒಂದಾದ ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯು ರಾಮಾಯಣಕ್ಕೆ ಹೊಸ ನೋಟ ಹಾಗೂ ಹೊಸ ಭಾಷ್ಯವೊಂದನ್ನು ಕಟ್ಟಿಕೊಟ್ಟಿದ್ದಲ್ಲದೆ ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೊಟ್ಟಿತು. ಈ ಕೃತಿಗೆ ಗೌರವಾರ್ಪಣವಾಗಿ ಅವಿರಿತ ಪ್ರತಿಷ್ಠಾನವು ಶ್ರೀ ರಾಮಾಯಣ ದರ್ಶನಂ ಪ್ರಸಂಗವೊಂದರ ಮನರಂಜನೀಯ ದೃಶ್ಯ ರೂಪಕವಾದ ವಾಲಿವಧೆ ನಾಟಕವನ್ನು ಆಯೋಜಿಸಿದೆ.

ಈ ನಾಟಕವು ಮಕ್ಕಳನ್ನು ತಲ್ಲೀನರಾಗಿಸಿ, ಪ್ರೌಢರನ್ನು ಭಾವುಕವಾಗಿಸುವ ಅತ್ಯಂತ ವಿಶಿಷ್ಟ ಹಾಗೂ ನವಿರಾದ ನಾಟಕವಾಗಿದೆ. ಶೇಷಗಿರಿ ಹಳ್ಳಿಯ ರೈತಾಪಿ ಜನ ತಾವೇ ಕಟ್ಟಿಕೊಂಡ ಶ್ರೀ ಗಜಾನನ ಯುವಕ ಮಂಡಲಿ ಮೂಲಕ, ಎಂ. ಗಣೇಶ ಉಡುಪಿ ಅವರ ನಿದೇರ್ಶನದಲ್ಲಿ ನಾಟಕವನ್ನು ಪ್ರಯೋಗಿಸಲಾಗುತ್ತಿದೆ. ಟಿಕೆಟ್ ದರ 249 ರೂಗಳಿದೆ.

Aviratha presents Vaali Vadhe play performance on May 19

ಏನು- ವಾಲಿವಧೆ ನಾಟಕ
ಎಲ್ಲಿ- ಚೌಡಯ್ಯ ಮೆಮೊರಿಯಲ್‌ಹಾಲ್‌
ಯಾವಾಗ-ಮೇ 19
ಸಮಯ-ಸಂಜೆ 5.30

English summary
Aviratha, cultural forum will present 'Vaali Vadhe', a play based on Shree Ramayana Darshanam written by Rashtrakavi Kuvempu on May 19 at Chowdaiah Memorial Hall in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X