ಕಾಲೇಜಿಗೆ ಬಂಕ್ ಹಾಕಿದ್ರೆ ಎಸ್ಎಂಎಸ್ ಬರುತ್ತೆ!
ಬೆಂಗಳೂರು, ಮೇ 30 : ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಲಾಸಿಗೆ ಬಂಕ್ ಹೊಡೆದರೆ ತಂದೆ-ತಾಯಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗಲಿದೆ. ಹೌದು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಇಂಟರ್ನಲ್ ಅಂಕಗಳ ಬಗ್ಗೆ ಪೋಕಷರಿಗೆ ಮಾಹಿತಿ ರವಾನಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಶನಿವಾರ
ಬೆಂಗಳೂರಿನಲ್ಲಿ
ಮಾತನಾಡಿದ
ಉನ್ನತ
ಶಿಕ್ಷಣ
ಸಚಿವ
ಆರ್.ವಿ.ದೇಶಪಾಂಡೆ
ಅವರು
ಈ
ಕುರಿತು
ಮಾಹಿತಿ
ನೀಡಿದರು.
ಕಾಲೇಜುಗಳಲ್ಲಿ
ವಿದ್ಯಾರ್ಥಿಗಳ
ಹಾಜರಾತಿ
ಮತ್ತು
ಇಂಟರ್ನಲ್
ಅಂಕಗಳ
ಕುರಿತು
ಪೋಷಕರಿಗೆ
ಎಸ್ಎಂಎಸ್
ಮತ್ತು
ಈ
ಮೇಲ್
ಕಳಿಸಲು
ಚಿಂತಿಸಲಾಗುತ್ತಿದೆ
ಎಂದರು.
[ಸರ್ಕಾರಿ
ಕಾಲೇಜಿನಲ್ಲಿ
5
ರೂ.ಗೆ
ಬಿಸಿಯೂಟ]
'ಈ ಯೋಜನೆಯನ್ನು ಜಾರಿಗೊಳಿಸಲು ನಾವು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಆದರೆ, ಬೆಂಗಳೂರು ನಗರದಲ್ಲಿರುವ ಕಾಲೇಜುಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ದೇಶಪಾಂಡೆ ಅವರು ಹೇಳಿದರು. [ನಕಲಿ ವಾಟ್ಸಪ್ ಸಂದೇಶ ತಂದ ಫಜೀತಿ]
'ಮನೆಯಿಂದ ಕಾಲೇಜಿಗೆಂದು ಬರುವ ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡುತ್ತಾರೆ. ಈ ಕುರಿತು ಪೋಷಕರಿಗೆ ಮಾಹಿತಿ ತಿಳಿಸಲು ಸಹಾಯಕವಾಗುವಂತೆ ಈ ಯೋಜನೆ ಆರಂಭಿಸಲು ಮುಂದಾಗಿದ್ದೇವೆ. ವಿದ್ಯಾರ್ಥಿಗಳ ಕಾಲ-ಕಾಲದ ಹಾಜರಾತಿ ಮತ್ತು ಇಂಟರ್ನಲ್ ಅಂಕಗಳ ಕುರಿತು ಪೋಷಕರಿಗೆ ಎಸ್ಎಂಎಸ್ ಅಥವ ಈ ಮೇಲ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ' ಎಂದು ವಿವರಣೆ ನೀಡಿದರು.