ಬೆಂಗಳೂರು : ಎಟಿಎಂ ದೋಚಲು ಬಂದು ಸಿಕ್ಕಿಬಿದ್ದರು
ಬೆಂಗಳೂರು, ಫೆ.2 : ಬೆಂಗಳೂರಿನ ಎಟಿಎಂ ಮೇಲೆ ಮತ್ತೆ ದರೋಡೆಕೋರರ ಕಣ್ಣು ಬಿದ್ದಿದೆ. ಇಂದಿರಾ ನಗರದ ಕೇಂಬ್ರಿಡ್ಜ್ ರಸ್ತೆಯಲ್ಲಿ ಎಟಿಎಂ ದೋಚಲು ಬಂದ ಖದೀಮರಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸೋಮವಾರ
ಮುಂಜಾನೆ
3
ಗಂಟೆ
ಸುಮಾರಿಗೆ
ಕೇಂಬ್ರಿಡ್ಜ್
ರಸ್ತೆಯಲ್ಲಿನ
ಕೆನರಾ
ಬ್ಯಾಂಕ್
ಎಟಿಎಂ
ಬಳಿ
ಬೈಕ್ನಲ್ಲಿ
ಬಂದ
ಇಬ್ಬರು
ಸಶಸ್ತ್ರಧಾರಿ
ದರೋಡೆಕೋರರು
ಎಟಿಎಂಗೆ
ನುಗ್ಗಿ
ಹಣ
ದೋಚಲು
ಪ್ರಯತ್ನ
ನಡೆಸಿದ್ದರು.
ವಿಷಯ
ತಿಳಿದು
ಸ್ಥಳಕ್ಕೆ
ಆಗಮಿಸಿದ
ಜನರು
ಇಬ್ಬರನ್ನು
ಹಿಡಿದು,
ಪೊಲೀಸರಿಗೆ
ಒಪ್ಪಿಸಿದ್ದಾರೆ.
[ಎಟಿಎಂನಲ್ಲಿ
ವಂಚನೆ
ನಡೆದಾಗ
ಹೀಗೆ
ಮಾಡಿ]
ಸಿಕ್ಕಿಬಿದ್ದವರನ್ನು ಆರ್.ಪಿ. ಗುಪ್ತಾ ಹಾಗೂ ಮ್ಯಾಥ್ಯೂಸ್ ಎಂದು ಗುರುತಿಸಲಾಗಿದೆ. ಖದೀಮರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಜನರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ದರೋಡೆಕೋರರು ಲಾಂಗು, ಮಚ್ಚುಗಳನ್ನು ಹಿಡಿದುಕೊಂಡು ಬಂದಿದ್ದರು ಎಂದು ಜನರು ಮಾಹಿತಿ ನೀಡಿದ್ದಾರೆ. [ಎಟಿಎಂಗೆ ಭದ್ರತೆ ಒದಗಿಸಿ]
ಎಟಿಎಂಗೆ ಸಿಸಿಟಿವಿ ಮತ್ತು ಸೈರನ್ ಆಳವಡಿಸಲಾಗಿತ್ತು. ಇಂದಿರಾ ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಅವುಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಇಬ್ಬರು ಹಿಂದೆಯೂ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.