ಎಟಿಎಂಗೆ ಹಣ ತುಂಬಲು ಬಂದವರು 90 ಲಕ್ಷದೊಂದಿಗೆ ಪರಾರಿ!
ಬೆಂಗಳೂರು, ಜನವರಿ 30 : ಎಟಿಎಂಗೆ ಹಣ ತುಂಬಿಸಲು ಬಂದು ಸಿಬ್ಬಂದಿ ಹಣದೊಂದಿಗೆ ಪರಾರಿಯಾದ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವೃತ್ತದ ಬಳಿ ಮಂಗಳವಾರ ನಡೆದಿದೆ.
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಪೊಲೀಸ್ ಠಾಣೆ ವೃತ್ತದ ಬಳಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಸಿಬ್ಬಂದಿಗಳು 90 ಲಕ್ಷ ರೂ ಜತೆಗೆ ಪರಾರಿಯಾಗಿದ್ದಾರೆ. ಹಣದ ಜತೆಗೆ ವಾಹನವನ್ನೂ ಕೊಂಡೊಯ್ದಿದ್ದಾರೆ. ಸಿಎಂಎಸ್ ಕಂಪನಿಗೆ ಸೇರಿದ ವಾಹನವಾಗಿದ್ದು ವಾಹನ ಚಾಲಕ ನಾರಾಯಣಸ್ವಾಮಿ ಹಾಗೂ ನೌಕರ ನರಸಿಂಹರಾಜು ಪರಾರಿಯಾಗಿದ್ದಾರೆ.
ಗನ್ ಮ್ಯಾನ್ ಬಳಿ ಬಾಳೆ ಹಣ್ಣು ತರಲು ತೆರಳಿದ್ದ ಸಂದರ್ಭದಲ್ಲಿ ವಾಹನದೊಂದಿಗೆ ಪರಾರಿಯಾಗಿದ್ದಾರೆ. ವಾಹನವು ಸ್ಥಳದಲ್ಲಿ ಕಾಣದಿದ್ದ ಪರಿಣಾಮ ಗನ್ ಮೆನ್ ಗೆ ಅನುಮಾನ ಉಂಟಾಗಿ ತಕ್ಷಣದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.
Comments
English summary
In a strange incident, Van driver and clerk belongs to CMS security agency have been escaped with Rs90 lakhs which was brought Jnana Bharati police station circle in Bengaluru.
Story first published: Tuesday, January 30, 2018, 16:05 [IST]