ನಾಗವಲ್ಲಿ ಕತೆ ಹೇಳಿ ಮೂವತ್ತು ಲಕ್ಷ ವಂಚಿಸಿದ ಕಳ್ಳ ಜ್ಯೋತಿಷಿ
ಬೆಂಗಳೂರು, ಆಗಸ್ಟ್ 21: ಆಪ್ತಮಿತ್ರ ಸಿನಿಮಾದ ನಾಗವಲ್ಲಿಯ ಕತೆ ಹೇಳಿ ಜ್ಯೋತಿಷಿಯೊಬ್ಬ ಮೂವತ್ತು ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಜ್ಯೋತಿಷಿ ಎಂದು ಹೇಳಿಕೊಂಡಿದ್ದ ವೆಂಟಕ ಕೃಷ್ಣಾಚಾರಿ, ವಿಜಯನಗರದ ಮನೆಯೊಂದರಲ್ಲಿ ವಾಸ್ತುದೋಷವಿದೆ ಎಂದು ಹೇಳಿ ಹೋಮ ಮಾಡಿಸಿದ್ದ. ನಂತರ ಅದೇ ಮನೆಯ ಯುವತಿಯ ಆತ್ಮೀಯತೆ ಗಿಟ್ಟಿಸಿಕೊಂಡು ಮೊಬೈಲ್ ಮೂಲಕ ಸಂಪರ್ಕ ಮಾಡುತ್ತಿದ್ದ.
ನಿಖರವಾಗಿ ಫಲಿತಾಂಶ ಹೇಳುವ ಜ್ಯೋತಿಷಿಗಳಿಗೆ 10 ಲಕ್ಷ ರೂ.ಬಹುಮಾನ: ಪ್ರೊ.ನರೇಂದ್ರ ನಾಯಕ್ ಘೋಷಣೆ
ಯುವತಿಗೆ 'ನೀನು ಹಿಂದಿನ ಜನ್ಮದಲ್ಲಿ ನೃತ್ಯಗಾರ್ತಿಯಾಗಿದ್ದೆ, ಕಳೆದ ಮೂರು ಜನ್ಮದಿಂದಲೂ ನಾನು-ನೀನು ಗಂಡ ಹೆಂಡತಿ ಆಗಿದ್ದೇವು. ಕಳೆದ ಜನ್ಮದಲ್ಲಿ ನಿನ್ನ ಸಾವಿಗೆ ನಾನೇ ಕಾರಣ ಆಗಿದ್ದೆ ಹಾಗಾಗಿ ಈ ಬಾರಿ ನಾವು ಒಂದಾಗಿಲ್ಲ. ನೀನು ನನ್ನ ಮದುವೆ ಆದರೆ ಮಾತ್ರವೇ ನಿನಗೆ ಮೋಕ್ಷ ಸಿಗುತ್ತದೆ' ಎಂದು ಹೇಳಿದ್ದಾನೆ.
ಈಗಾಗಲೇ ಮದುವೆಯಾಗಿ ಮಕ್ಕಳೂ ಇರುವ ಸ್ವಾಮೀಜಿ, ಯುವತಿಗೆ ಪುನರ್ಜನ್ಮದ ಕತೆ ಹೇಳಿ ನಂಬಿಸಿ, ಆಕೆಯ ಹೆಸರಲ್ಲಿ ವಿವಿಧ ಬ್ಯಾಂಕುಗಳಲ್ಲಿ ಮೂವತ್ತು ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ.
ಯುವತಿಯ ಬ್ಯಾಗಿನಲ್ಲಿ ನಿಂಬೆಹಣ್ಣು, ಹಣ್ಣಿನ ಬೊಂಬೆ ಇನ್ನೂ ಏನೇನೋ ವಸ್ತುಗಳನ್ನು ಹಾಕಿದ್ದ ಜ್ಯೋತಿಷಿ ಆಕೆಯನ್ನು ತನ್ನ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗಿ ಏನೇನೋ ಪೂಜೆ ಸಹ ಮಾಡಿಸಿದ್ದ. ಖಾಸಗಿ ಸಂಸ್ಥೆಯಲ್ಲಿ ಚಾರ್ಟೆಡ್ ಅಕೌಂಟೆಟ್ ಆಗಿದ್ದ ಯುವತಿ ಜ್ಯೋತಿಷಿ ಹೇಳಿದಂತೆ ಕೇಳುತ್ತಿದ್ದಳು.
ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ?
ನಿನ್ನೆ ಹನುಮಂತನಗರದಲ್ಲಿನ ಜ್ಯೋತಿಷಿ ಮನೆಗೆ ತೆರಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಗಳು ಜ್ಯೋತಿಷಿಗೆ ಗೂಸಾ ಕೊಟ್ಟಿದ್ದಾರೆ. ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.