ಗುರುತಿನ ಚೀಟಿ ಗೊಂದಲ, ಅಕ್ರಮಕ್ಕೆ ಮುನಿರತ್ನ ಕಾರಣ : ಬಿಜೆಪಿ
ಬೆಂಗಳೂರು, ಮೇ 10:ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಪತ್ತೆಯಾಗಿರುವ ಮತದಾನದ ಗುರುತಿನ ಚೀಟಿ ಪ್ರಕರಣದ ಗೊಂದಲ ಮುಂದುವರೆದಿದೆ.
ಆರ್ ಆರ್ ನಗರದಲ್ಲಿ ಚುನಾವಣೆ ನಡೆಯುವುದೋ? ಇಲ್ಲವೋ? ಎಂಬುದರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳಲಿದೆ. ಈ ನಡುವೆ ಈ ಎಲ್ಲಾ ಅಕ್ರಮ, ಗೊಂದಲಕ್ಕೆ ಶಾಸಕ ಮುನಿರತ್ನ ಅವರೇ ಕಾರಣ ಎಂದು ಬಿಜೆಪಿ ರಾಷ್ಟ್ರ್ರೀಯ ವಕ್ತಾರ ಸಂಬೀತ್ ಪಾತ್ರ ಅವರು ಆರೋಪಿಸಿದ್ದಾರೆ.
ದೊರೆತ ಎಲ್ಲ ವೋಟರ್ ಐಡಿಗಳು ಅಸಲಿ: ಚುನಾವಣಾ ಆಯೋಗ
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಕೆಸರೆರಚಾಟ ಮುಂದುವರಿದಿದ್ದು, ಬಿಜೆಪಿ ಆರೋಪಗಳಿಗೆ ಉತ್ತರಿಸಲು ಮುನಿರತ್ನ ಅವರು ಕೂಡಾ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬಿತ್ ಪಾತ್ರ ಅವರು, ನಕಲಿ ವೋಟರ್ ಐಡಿ ಪ್ರಕರಣದಲ್ಲಿ ಶಾಸಕ ಮುನಿರತ್ನ ಸೂತ್ರಧಾರ ಎಂಬುದು ಸ್ಪಷ್ಟವಾಗಿದ್ದು, ಈ ಸಂಬಂಧ ಬಂಧಿತರಾಗಿರುವ ನಟರಾಜ್, ಕಾರ್ಪೊರೇಟರ್ ಜಿ.ಕೆ.ವೆಂಕಟೇಶ್ ಮತ್ತು ಫ್ಲಾಟ್ ಬಾಡಿಗೆಗೆ ಪಡೆದ ರೇಖಾ ಜೆಟ್ಟಿ ಮತ್ತು ರಂಗರಾಜು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕರ ಬಂಟರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
She (Manjula Nanjamari, owner of flat where fake voter IDs were found) was a BJP corporator, for past 15 years she has no link with BJP. We demand investigation & immediate countermanding of election in Rajarajeshwari Nagar constituency: Sambit Patra, BJP #KarnatakaElections2018 pic.twitter.com/GBnSXB9AMk
— ANI (@ANI) May 9, 2018
ರಾಕೇಶ್ ಫ್ಲಾಟ್ನ ಬಾಡಿಗೆದಾರರಲ್ಲ: ನಕಲಿ ವೋಟರ್ ಐಡಿ ಸಿಕ್ಕ ಮನೆ ಮಾಲಕಿ ಸ್ಪಷ್ಟನೆ
ಈ ಚುನಾವಣೆಯಲ್ಲಿ ರಾಜ್ಯದ ಮತದಾರರ ಸಂಖ್ಯೆ ಸರಾಸರಿ ಶೇ 6.3 ಏರಿಕೆಯಾಗಿದ್ದರೆ, ಆರ್.ಆರ್. ನಗರದಲ್ಲಿ ಶೇ 10.3 ಏರಿಕೆಯಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಈ ನಕಲಿಯಾಟದ ಸೂತ್ರಧಾರಿ ಮುನಿರತ್ನ ಎಂಬುದು ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ವೋಟರ್ ಐಡಿ ಸಿಕ್ಕಿದ ಫ್ಲ್ಯಾಟ್ ಗೂ ನನಗೂ ಸಂಬಂಧವಿಲ್ಲ: ರಾಕೇಶ್
ಅಭಿವೃದ್ಧಿ ಹೆಸರಲ್ಲಿ ಗೆಲ್ಲಲು ಸಾಧ್ಯವಾಗದ ಕಾಂಗ್ರೆಸ್ ರಾಜಕಾರಣವನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಕಾಂಗ್ರೆಸ್ ಅದನ್ನು ಕಗ್ಗೊಲೆ ಮಾಡಿದೆ ಎಂದು ಆರೋಪಿಸಿದರು.