ಪೊಲೀಸರಿಂದ ಹಲ್ಲೆ; ಸಾಯುವ ನಿರ್ಧಾರ ಮಾಡಿದ್ದೇನೆ ಎಂದ ಚಾಲಕ
Recommended Video
ಬೆಂಗಳೂರು, ಸೆಪ್ಟೆಂಬರ್ 26 : ಸಂಚಾರಿ ಪೊಲೀಸ್ ಮುಖ್ಯ ಪೇದೆಯಿಂದ ಹಲ್ಲೆಗೊಳಗಾದ ಮಿನಿ ಟ್ರಕ್ ಚಾಲಕ ಸುನೀಲ್ ಸಾಯುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾನೆ. "ನಮಗೆ ರಕ್ಷಣೆ ಕೊಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿ" ಎಂದು ಮನವಿ ಮಾಡಿದ್ದಾನೆ.
ಟಾಟಾ ಏಸ್ ಚಾಲಕ ಸುನೀಲ್ ಮಾಧ್ಯಮಗಳ ಜೊತೆ ಮಾತನಾಡಿದ್ದು, "ನನಗೆ ಜೀವ ಭಯವಿದೆ. ನಾನು ಸಾಯುವ ನಿರ್ಧಾರ ಮಾಡಿದ್ದೇನೆ. ನನಗೆ ರಕ್ಷಣೆ ಕೊಡಿ, ತಪ್ಪು ಯಾರದು ಇದೆಯೋ ಅವರಿಗೆ ಶಿಕ್ಷೆ ಕೊಡಿ" ಎಂದು ಹೇಳಿದ್ದಾನೆ.
ಪೇದೆಯಿಂದ ಹಲ್ಲೆ; ಟ್ರಕ್ ಚಾಲಕನಿಗೆ ಬೆದರಿಕೆ, ಪೇದೆ ಎತ್ತಂಗಡಿ
"ಸಂಚಾರಿ ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿ ನನಗೆ ಕೆಟ್ಟ ಶಬ್ದಗಳಿಂದ ಬೈದರು. ನಮ್ಮ ಮನೆಗೆ ಹೋಗಿ ತಾಯಿಗೆ ಧಮ್ಕಿ ಹಾಕಿದ್ದಾರೆ. ಚಾಲಕರಿಗೆ ಬೆಲೆಯೇ ಇಲ್ಲ. ನನಗೆ ಜೀವ ಭಯವಿದೆ. ಈ ಕುರಿತು ಪೊಲೀಸರಿಗೂ ದೂರು ನೀಡಿದ್ದೇನೆ" ಎಂದು ಸುನೀಲ್ ಹೇಳಿದರು.
ವೈರಲ್ ವಿಡಿಯೋ; ಹಲ್ಲೆ ಮಾಡಿದ್ದ ಪೇದೆ ಮಹಾಸ್ವಾಮಿ ಎತ್ತಂಗಡಿ
ಸಂಚಾರಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸುನೀಲ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಬಳಿಕ ಹೆಡ್ ಕಾನ್ಸ್ಟೇಬಲ್ನನ್ನು ವರ್ಗಾವಣೆ ಮಾಡಿ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.
ವೈರಲ್ ವಿಡಿಯೋ; ಪೊಲೀಸ್ ಅಲ್ಲ ಚಾಲಕನ ವಿರುದ್ಧ ಎಫ್ಐಆರ್
ಘಟನೆ ಬಗ್ಗೆ ಸುನೀಲ್ ಹೇಳುವುದೇನು?
"ಅಂದು ನಾನು ಮಾರ್ಕೆಟ್ ಕಡೆಯಿಂದ ಜೆ. ಸಿ. ರಸ್ತೆ ಕಡೆಗೆ ಹೋಗುತ್ತಿದ್ದೆ. ನಾನು ಯಾವುದೇ ರಾಂಗ್ ರೂಟ್ನಲ್ಲಿ ಹೋಗಿಲ್ಲ. ಒನ್ ವೇನಲ್ಲಿ ಹೋಗು ಎಂದು ಹೇಳಿದ್ದೆ ಟ್ರಾಫಿಕ್ ಪೊಲೀಸ್. ಆಗ ಬೇರೊಬ್ಬ ಪೊಲೀಸ್ ಬಂದು ನನ್ನ ತಲೆಗೆ ಹೆಲ್ಮೆಟ್ನಿಂದ ಹೊಡೆದರು. ನನ್ನದು ತಪ್ಪಿಲ್ಲ ಎಂದರೂ ಕೆಟ್ಟದಾಗಿ ಬೈದರು" ಎಂದು ಸುನೀಲ್ ಹೇಳಿದ್ದಾರೆ.
ತಾಯಿಗೆ ಬೆದರಿಕೆ ಹಾಕಿದ್ದಾರೆ
"ನಮ್ಮ ಮನೆಗೆ ಅಪರಿಚಿತರು ಬಂದು ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ತಾಯಿ, ನನಗೆ ಬೆದರಿಕೆ ಹಾಕಿದ್ದಾರೆ. ರಕ್ಷಣೆ ನೀಡುವಂತೆ ಕಂಪ್ಲೇಟ್ ಕೊಟ್ಟಿದ್ದೇನೆ. ಚಾಲಕರಿಗೆ ಬೆಲೆಯೇ ಇಲ್ಲವಾಗಿದೆ. ನನಗೆ ನ್ಯಾಯ ಕೊಡಿಸಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಿ" ಎಂದು ಸುನೀಲ್ ಮನವಿ ಮಾಡಿದ್ದಾರೆ. ಈ ಕುರಿತು ಸುನೀಲ್ ತಾಯಿ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಸಂಚಾರಿ ಪೊಲೀಸರಿಂದ ಹಲ್ಲೆ
ಕಳೆದ ಶುಕ್ರವಾರ ಬೆಂಗಳೂರಿನ ಟೌನ್ ಹಾಲ್ ಸಮೀಪ ಮಿನಿ ಟ್ರಕ್ ಚಾಲಕ ಸುನೀಲ್ ಮೇಲೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಮಹಾಸ್ವಾಮಿ ಹಲ್ಲೆ ನಡೆಸುವ ವಿಡಿಯೋ ವೈರಲ್ ಆಗಿತ್ತು. ಸುನೀಲ್ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪೇದೆ ಹಲ್ಲೆ ಮಾಡಿದ್ದನು.
ಪೊಲೀಸ್ ಪೇದೆ ವರ್ಗಾವಣೆ
ವಿಡಿಯೋ ವೈರಲ್ ಆಗುತ್ತಿದ್ದಂತೆ ಹೆಡ್ ಕಾನ್ಸ್ಟೇಬಲ್ ಮಹಾಸ್ವಾಮಿಯನ್ನು ವರ್ಗಾವಣೆ ಮಾಡಿ ತರಬೇತಿ ವಿಭಾಗಕ್ಕೆ ಹಾಕಲಾಗಿತ್ತು. ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದ್ದು, ಡಿವೈಎಸ್ಪಿ ಮಟ್ಟದ ಅಧಿಕಾರಿ ತನಿಖೆ ನಡೆಸಲಿದ್ದಾರೆ.