ಜೆಡಿಎಸ್ ವರಿಷ್ಠರಿಗೆ ಶಾಕ್ ಕೊಟ್ಟ ಅರವಿಂದ ಲಿಂಬಾವಳಿ
ಬೆಂಗಳೂರು, ನವೆಂಬರ್ 25: ಮತ್ತೆ ಆಪರೇಷನ್ ಕಮಲ ಮಾಡುವ ಸೂಚನೆಯನ್ನು ಶಾಸಕ ಅರವಿಂದ ಲಿಂಬಾವಳಿ ನೀಡಿದ್ದಾರೆ.
ಒಂದೊಮ್ಮೆ ಬಿಜೆಪಿಯು 7ಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಗೆದ್ದರೆ ಸರ್ಕಾರ ಪತನವಾಗಲಿದೆ ಆಗ ಮತ್ತೆ ಆಪರೇಷನ್ ಕಮಲ ಮಾಡಬೇಕಾಗುತ್ತದೆ ಎನ್ನುವ ಸೂಚನೆ ದೊರೆತಿದೆ.
ನಿಜವಾದ ಅನರ್ಹರು ನಮ್ಮ ಶಾಸಕರಲ್ಲ ಸಿದ್ದರಾಮಯ್ಯ : ನಳಿನ್ ಕುಮಾರ್
ಜೆಡಿಎಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಮತ್ತೆ ಒತ್ತಿ ಹೇಳಿದ್ದಾರೆ, ಫಲಿತಾಂಶ ಬಂದ ಬಳಿಕ ರಾಜಕೀಯ ಧ್ರುವೀಕರಣ ಆಗಲಿದೆ ಎಂದರು. ಈ ಮೂಲಕ ಮತ್ತೆ ಆಪರೇಷನ್ ಕಮಲ ನಡೆಯಲಿದೆ ಎನ್ನುವ ಸೂಚನೆ ನೀಡಿದರು.
ಲಿಂಬಾವಳಿ ಹೇಳಿಕೆ ನಂತರ ಜೆಡಿಎಸ್ ವಲಯದಲ್ಲಿ ಟೆನ್ಶನ್ ಆರಂಭವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಹಕರಿಸಿದ ಅನರ್ಹ ಶಾಸಕರಿಗೆ ಈಗ ಬಿಜೆಪಿ ಟಿಕೆಟ್ ನೀಡಿದೆ.
ಅಲ್ಲದೆ, ಗೆದ್ದರೆ ಸಚಿವರನ್ನಾಗಿ ಮಾಡುವ ಭರವಸೆಯನ್ನೂ ನೀಡಿದೆ. ಹೀಗಾಗಿ ವಿಪಕ್ಷ ಶಾಸಕರಿಗೆ ಒಂದು ಭರವಸೆ ಬಂದಿದೆ. ಬಿಜೆಪಿ ಸಂಪಕರ್ದಲ್ಲಿರುವ ಶಾಸಕರು ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ಒಂದೊಮ್ಮೆ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಮುಂದಾದರೆ, ಜೆಡಿಎಸ್ನ ಕೆಲ ಶಾಸಕರು ಬಿಜೆಪಿ ಸೇರುವುದು ಹೌದು ಎಂದು ಮೂಲಗಳು ಹೇಳುತ್ತಿವೆ. ಹೀಗಾದರೆ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಕೂಡ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳಲಿದೆ.