ಮೋದಿ ವಿರುದ್ಧ ಕೇಜ್ರಿವಾಲ್ ಸ್ಪರ್ಧೆ? ಅರವಿಂದ್ ಟ್ವೀಟ್
ಬೆಂಗಳೂರು, ಮಾ.16: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾರಣಸಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಮೋದಿ ವಿರುದ್ಧ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಜನರಲ್ಲಿ ಮನೆ ಮಾಡಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮೋದಿ ವಿರುದ್ಧ ಕೇಜ್ರಿವಾಲ್ ಸ್ಪರ್ಧಿಸುವರೇ? ಎಂಬ ಪ್ರಶ್ನೆಗೆ ಉತ್ತರ ಭಾನುವಾರ ಸಂಜೆ ಸಿಗುವ ನಿರೀಕ್ಷೆಯಿದೆ.
ಈ ಬಗ್ಗೆ ಸ್ವತಃ ಅರವಿಂದ್ ಕೇಜ್ರಿವಾಲ್ ಅವರೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಟ್ವೀಟ್ ಹೀಗಿದೆ ನೋಡಿ...
Many
people
asking
me
-
"will
i
contest
against
Modi
ji?"
I
will
talk
on
this
issue
in
today's
rally
at
Bangalore
—
Arvind
Kejriwal
(@ArvindKejriwal)
March
16,
2014
ಭಾನುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ ನಂತರ ಸಂಜೆ ವೇಳೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಬಳಿಗೆ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರದ ಮೆರವಣಿಗೆ ಬಂದು ನಿಲ್ಲಲಿದೆ. ಫ್ರೀಡಂ ಪಾರ್ಕ್ ನಲ್ಲಿ ಸಂಜೆ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅರವಿಂದ್ ಕೇಜ್ರಿವಾಲ್ ಅವರು ಮಾತಾಡಲಿದ್ದಾರೆ. ಇದೇ ವೇಳೆ ತಾವು ಲೋಕಸಭೆಗೆ ಸ್ಪರ್ಧಿಸುವ ವಿಚಾರ. ಮೋದಿ ವಿರುದ್ಧ ಸ್ಪರ್ಧಿಸುವ ಬಗ್ಗೆ, ಕರ್ನಾಟಕದ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ವಿವರ ನೀಡುವ ಸಾಧ್ಯತೆಯಿದೆ.[ಕರ್ನಾಟಕದ ಆಪ್ ಅಭ್ಯರ್ಥಿಗಳ ಪರಿಚಯ]
ಲೋಕಸಭೆ
ಚುನಾವಣೆಗೆ
ಪಕ್ಷದ
ಅಭ್ಯರ್ಥಿಗಳ
ಪರ
ಪ್ರಚಾರ
ನಡೆಸಲು
ಬೆಂಗಳೂರಿಗೆ
ಆಗಮಿಸಿರುವ
ಆಮ್
ಆದ್ಮಿ
ಪಕ್ಷದ
ಮುಖ್ಯಸ್ಥ
ಅರವಿಂದ್
ಕೇಜ್ರಿವಾಲ್
ಶನಿವಾರ
ನಗರದಲ್ಲಿ
ತಮ್ಮ
ಶಕ್ತಿ
ಪ್ರದರ್ಶನ
ಮಾಡಿದ್ದರು.
ಬೆಂಗಳೂರು
ಸೆಂಟ್ರಲ್,
ಬೆಂಗಳೂರು
ದಕ್ಷಿಣ
ಮತ್ತು
ಬೆಂಗಳೂರು
ಉತ್ತರ
ಕ್ಷೇತ್ರದಲ್ಲಿ
ಮಿಂಚಿನ
ಸಂಚಾರ
ನಡೆಸಿ
ಪಕ್ಷದ
ಅಭ್ಯರ್ಥಿಗಳ
ಪರವಾಗಿ
ಮತಯಾಚನೆ
ಮಾಡಿದ್ದರು.
[ವಿವರ
ಇಲ್ಲಿ
ಓದಿ]