ರಾಘವೇಂದ್ರ ಸ್ವಾಮಿಗಳ ವಿಶೇಷಾಂಕಕ್ಕೆ ಲೇಖನ ಆಹ್ವಾನ
ಬೆಂಗಳೂರು, ಜುಲೈ 8: ರಾಘವೇಂದ್ರ ಸ್ವಾಮಿಗಳ 'ಗುರುಸಾರ್ವಭೌಮ 2017' ವಿಶೇಷ ಸಂಚಿಕೆಗೆ ಲೇಖನ-ಕವಿತೆ ಹಾಗೂ ರಾಯರ ಪವಾಡಗಳ ಬಗ್ಗೆ ತಮ್ಮ ಅನುಭವವನ್ನು ಲೇಖನದ ಮೂಲಕ ತಿಳಿಸಲು ಸ್ವದೇಶಿ ಉದ್ಯಮ ಪತ್ರಿಕೆಯು ಆಹ್ವಾನ ನೀಡಿದೆ.
ಶಿವಮೊಗ್ಗದ ದಲಿತರ ಬಡಾವಣೆಯಲ್ಲಿ ಮಂತ್ರಾಲಯ ಶ್ರೀ ಪಾದಯಾತ್ರೆ
ರಾಘವೇಂದ್ರ ಸ್ವಾಮಿಗಳ ಸಮಗ್ರ ಚರಿತ್ರೆಯೂ ಸೇರಿದ ಹಾಗೆ ಸಾಹಿತಿಗಳ ವಿಶೇಷ ಲೇಖನ, ಮಂತ್ರಾಲಯದ ಬಗ್ಗೆ ವರ್ಣನೆ ಇರುವ ವಿಶೇಷ ಸಂಚಿಕೆಯನ್ನು ಪ್ರಕಟ ಆಗಲಿದೆ. ರಾಯರ ಜೀವನ ಚರಿತ್ರೆ ಆಧರಿಸಿದ ವಿಶೇಷ ಸಂಚಿಕೆಯಲ್ಲಿ ರಾಯರ ಶ್ಲೋಕ ಇನ್ನಿತರ ವಿಶೇಷ ಮಾಹಿತಿ ಇರುವ ಬಹು ವರ್ಣದ ಸಂಚಿಕೆ ಸಿದ್ಧವಾಗಲಿದೆ.
ವಿದುಷಿ ಡಾ.ಶ್ಯಾಮಲಾ ಜಿ.ಭಾವೆ ಅವರು ಸೇರಿದಂತೆ ನಾಡಿನ ಪ್ರಮುಖ ರಾಜಕಾರಣಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ವಿಶೇಷಾಂಕ ಬಿಡುಗಡೆ ಆಗಲಿದೆ. ಆದ್ದರಿಂದ ಲೇಖನ, ಕವಿತೆ, ರಾಯರ ಪವಾಡದ ಅನುಭವ, ಗುರುರಾಯರ ದೇವಾಲಯದ ಚರಿತ್ರೆ (ವಿಳಾಸ, ದೂರವಾಣಿ ಒಳಗೊಂಡಂತೆ) ಇತ್ಯಾದಿ ಇದ್ದಲ್ಲಿ, ಈ ಸಂದರ್ಭಕ್ಕೆ ಸೂಕ್ತ ಎನಿಸಿದಲ್ಲಿ ಕಳಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ.
ಜುಲೈ 31ರೊಳಗೆ ಕಳುಹಿಸಿ ಕೊಡಬೇಕು. ವಿಳಾಸ: ಸ್ವದೇಶಿ ಉದ್ಯ್ಮ, 'ಕರುಣಿಸು ಗುರುರಾಯ' ವಿಶೇಷಾಂಕ ಸಮಿತಿ, 369, ಊಳಿಗಾ ವಾಣಿಜ್ಯ ಸಂಕೀರ್ಣ, ಸಂಪಿಗೆ ರಸ್ತೆ, ಮಲ್ಲೇಶ್ವರ, ಬೆಂಗಳೂರು 560003 ಈ ವಿಳಾಸಕ್ಕೆ ಕಳಿಸಬೇಕು. ಇ ಮೇಲ್