ಮೆಟ್ರೋ ಮಾರ್ಗ: ಬನ್ನೇರುಘಟ್ಟ ರಸ್ತೆಯಲ್ಲಿ 185 ಮರಗಳ ಸ್ಥಳಾಂತರ
ಬೆಂಗಳೂರು, ಜನವರಿ 09: ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದ ಕಾಮಗಾರಿ ಸಲುವಾಗಿ ಬಲಿಯಾಗಬೇಕಾಗಿದ್ದ ಬನ್ನೇರುಘಟ್ಟ ರಸ್ತೆ ಪಕ್ಕದ185ಮರಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಈ ಮರಗಳ ಸ್ಥಳಾಂತರ ಕಾಮರ್ಯವೂ ಆರಂಭವಾಗಿದೆ. ಈ ಮರಗಳ ಪೈಕಿ 51 ಮರಗಳನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆವರಣಕ್ಕೆ ಹಾಗೂ ಉಳಿದ 134 ಮರಗಳನ್ನು ಬಿಬಿಎಂಪಿಯ ಶಾಂತಿನಿಕೇತನ ಉದ್ಯಾನಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದರ ಸಂಪೂರ್ಣ ಹೊಣೆಯನ್ನು ಮೆಟ್ರೋ ನಿಗಮವಹಿಸಿಕೊಂಡಿದೆ.
ಎರಡನೇ ಹಂತದ ಮೆಟ್ರೋ ಮಾರ್ಗ: ಹಳಿ ಅಳವಡಿಸಲು ಭರದ ಸಿದ್ಧತೆ
ಕಾಮಗಾರಿಗಾಗಿ
ಅವುಗಳನ್ನು
ಕಡಿಯುವುದು
ಅಥವಾ
ಸ್ಥಳಾಂತರ
ಮಾಡುವುದು
ಅನಿವಾರ್ಯ.
ಮರಗಳ
ಹನನಕ್ಕೆ
ಸ್ಥಳೀಯರೂ
ವಿರೋಧಿಸಿದ್ದರು.
ಹೀಗಾಗಿ,
ಸ್ಥಳಾಂತರಕ್ಕೆ
ನಿಗಮದ
ಅಧಿಕಾರಿಗಳು
ಮುಂದಾಗಿದ್ದಾರೆ.
ಪ್ರತಿ
ಮರದ
ಸ್ಥಳಾಂತರಕ್ಕೆ10,750
ರೂ.ನಂತೆ
185
ಮರಗಳ
ಸ್ಥಳಾಂತರಕ್ಕೆ
19,88,750
ಖರ್ಚಾಗಲಿದೆ.
ಈಗಾಗಲೇ
ಆ
ಮರಗಳ
ರೆಂಬೆ
ಕೊಂಬೆಗಳನ್ನು
ಕಡಿಯುವ
ಕೆಲಸ
ಆರಂಭವಾಗಿದೆ
ಎಂದು
ನಿಗಮದ
ಮುಖ್ಯ
ಸಾರ್ವಜನಿಕ
ಸಂಪರ್ಕಾಧಿಕಾರಿ
ಯುಎ
ವಸಂತರಾವ್
ತಿಳಿಸಿದ್ದಾರೆ.
ಟ್ವಿಟರ್ ನಲ್ಲಿ ಮೆಚ್ಚುಗೆ: ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಮೆಟ್ರೊ ಕಾಮಗಾರಿಗಾಗಿ ಬಲಿಯಾಗಬೇಕಿದ್ದ ಮರಗಳನ್ನು ಸ್ಥಳಾಂತರ ಮಾಡುವುದಾಗಿ ನಿಗಮವು ಟ್ವಿಟರ್ ನಲ್ಲಿ ತಿಳಿಸಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.