ಬೆಂಗಳೂರಿನ ಚರ್ಚ್ಗಳಲ್ಲಿ ಭದ್ರತೆಗೆ ಆರ್ಚ್ ಬಿಷಪ್ ಪತ್ರ
ಬೆಂಗಳೂರು, ಮೇ 13: ಶ್ರೀಲಂಕಾದಲ್ಲಿ ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ಆತಂಕಗೊಂಡು ಬೆಂಗಳೂರಿನ ಚರ್ಚ್ಗಳಿಗೆ ಭದ್ರತೆ ಕಲ್ಪಿಸುವಂತೆ ಆರ್ಚ್ ಬಿಷಪ್ ಚರ್ಚ್ ಫಾದರ್ಗಳಿಗೆ ಪತ್ರ ಬರೆದಿದ್ದಾರೆ.
ಶ್ರೀಲಂಕಾ
ಸ್ಫೋಟದ
ಬಳಿಕ
ಬೆಂಗಳೂರಲ್ಲಿ
ಸಿಟಿ
ಕಮಿಷನರ್
ಹೈ
ಅಲರ್ಟ್
ಘೋಷಿಸಿದ್ದಾರೆ.
ಈ
ಬೆನ್ನಲ್ಲೇ
ಆರ್ಚ್
ಬಿಷಪ್
ಎಲ್ಲಾ
ಫಾದರ್ಗಳಿಗೆ
ಪತ್ರ
ಬರೆದಿದ್ದಾರೆ.
ಪತ್ರದಲ್ಲಿ
ನೀಡಿರುವ
ಸೂಚನೆಗಳೇನೇನು?
ಶ್ರೀಲಂಕಾ ಉಗ್ರ ದಾಳಿಗೂ ಮುನ್ನ ಏನಾಯ್ತು, ಕೃತ್ಯದ ಹಿಂದಿನ ಸಂಚು ಏನು?
-ಸಿಸಿಟಿವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿ ದಿನದ 24ಗಂಟೆಯೂ ಅದರ ಮೇಲೆ ನಿಗಾ ಇಡುವಂತೆ ಮಾಡುವುದು.
-ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕಟ್ಟೆಚ್ಚರವಹಿಸುವುದು, ಚಟುವಟಿಕೆ ಇಲ್ಲದ ಸಂದರ್ಭದಲ್ಲಿ ಲಾಕ್ ಮಾಡುವುದನ್ನು ಮರೆಯಬಾರದು.
-ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು, ಅಪರಿಚಿತರು ಬ್ಯಾಗ್, ಕವರ್ ಇತ್ಯಾದಿಗಳನ್ನು ತಂದರೆ ಆವರಣದಲ್ಲಿ ಎಸೆದು ಹೋಗುವುದಕ್ಕೆ ಅವಕಾಶ ನೀಡಬಾರದು.
-ತುರ್ತು ಸಂದರ್ಭದಲ್ಲಿ ಸುರಕ್ಷಿತವಾಗಿ ತೆರಳಲು ಸಾದ್ಯ ಆಗುವಂತೆ ತುರ್ತು ದ್ವಾರಗಳು ಇರಬೇಕು.