ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೇಶನ, ಮನೆಗಳ ಹಂಚಿಕೆಗೆ ಅರ್ಜಿ ಕರೆದ ಗೃಹ ಮಂಡಳಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಕರ್ನಾಟಕ ಗೃಹ ಮಂಡಳಿ ಸೂರ್ಯನಗರ 4ನೇ ಹಂತದ ವಸತಿ ಯೋಜನೆಗೆ ಬೇಡಿಕೆ ಸಮೀಕ್ಷೆಯನ್ನು ಪ್ರಕಟಿಸಿದೆ. ಆಸಕ್ತರು ನಿವೇಶನ/ಮನೆಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಲು 16/1/2020 ಕೊನೆಯ ದಿನವಾಗಿದೆ.

ಗೃಹ ಮಂಡಳಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡ್ಲವಾಡಿ ಮತ್ತು ಬಗ್ಗನದೊಡ್ಡಿ ಗ್ರಾಮಗಳಲ್ಲಿ 1938 ಎಕರೆ ಜಮೀನಿನಲ್ಲಿ ಉತ್ತಮ ಗುಣಮಟ್ಟದ ನಿವೇಶನ/ಮನೆಗಳನ್ನು ಅಭಿವೃದ್ಧಿ ಪಡಿಸಲಿದೆ.

 ಬಿಡಿಎ ನಿವೇಶನ ಕೊಳ್ಳುವ ಕನಸಿದ್ದರೆ ಸದ್ಯಕ್ಕೆ ಮರೆತುಬಿಡಿ ಬಿಡಿಎ ನಿವೇಶನ ಕೊಳ್ಳುವ ಕನಸಿದ್ದರೆ ಸದ್ಯಕ್ಕೆ ಮರೆತುಬಿಡಿ

ಯೋಜನೆಯಡಿ ಸಿಮೆಂಟ್ ರಸ್ತೆ, ಒಳಚರಂಡಿ ವ್ಯವಸ್ಥೆ, ಬೀದಿ ದೀಪ, ನೀರು ಸರಬರಾಜು ಇನ್ನಿತರೆ ಉತ್ತಮ ನಾಗರಿಕ ಸೌಕರ್ಯಕ್ಕಾಗಿ ವಾಣಿಜ್ಯ ನಿವೇಶನಗಳು ಮತ್ತು ಶಾಲೆ ಹಾಗೂ ಉದ್ಯಾನವನ ಮುಂತಾದ ಉದ್ದೇಶಗಳಿಗಾಗಿ ನಿವೇಶನ ಮೀಸಲಾಗಿಡಲಾಗಿದೆ.

 ಅನುದಾನ ನಂಬಿ ಹಳೆ ಮನೆ ಕೆಡವಿದರು, ದನದ ಕೊಟ್ಟಿಗೆಯಲ್ಲೇ ಉಳಿದರು ಅನುದಾನ ನಂಬಿ ಹಳೆ ಮನೆ ಕೆಡವಿದರು, ದನದ ಕೊಟ್ಟಿಗೆಯಲ್ಲೇ ಉಳಿದರು

ಈ ಯೋಜನೆಯಡಿ ನಿಯಮಾವಳಿಗೆ ಅನುಗುಣವಾಗಿ ನಿವೇಶನಗಳನ್ನು ಹೊಂದಲು ಬಯಸುವ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿವೇಶನಗಳಿಗೆ ಮಂಡಳಿ ವತಿಯಿಂದ ನಿಗದಿಪಡಿಸಿದ ಅಂದಾಜು ದರ ಪ್ರತಿ ಚದರ ಅಡಿಗೆ ರೂ. 1500 ರೂ., ಪ್ರತಿ ಚದರ ಮೀಟರ್‌ಗೆ 16,146 ರೂ.ಗಳು.

ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

ಅರ್ಜಿಗಳ ನೋಂದಣಿ

ಅರ್ಜಿಗಳ ನೋಂದಣಿ

ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕ 100 ರೂ. ಪಾವತಿ ಮಾಡಿ. ಅರ್ಜಿಗಳನ್ನು ಸಂಬಂಧಪಟ್ಟ ಜಿಲ್ಲಾ ಯೋಜನಾ ಕಚೇರಿಯಿಂದ ಹಾಗೂ ಸಂಬಂಧಿಸಿದ ಬ್ಯಾಂಕ್ ಶಾಖೆಗಳಿಂದ ಪಡೆಯತಕ್ಕದ್ದು.
ಎಸ್‌. ಸಿ. ರೋಡ್ ಕಾರ್ಪೊರೇಷನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಜಯನಗರ, Indusind bank ಬಸವನಗುಡಿ ಇಲ್ಲಿ ಅರ್ಜಿಗಳು ಸಿಗಲಿವೆ.

ನಿವೇಶನಗಳ ವಿವರಗಳು

ನಿವೇಶನಗಳ ವಿವರಗಳು

ಆನೇಕಲ್ ತಾಲೂಕಿನ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡ್ಲವಾಡಿ ಮತ್ತು ಬಗ್ಗನದೊಡ್ಡಿ ಗ್ರಾಮಗಳಲ್ಲಿಇರುವ ಸ್ವತ್ತುಗಳ ಅಳತೆ ಮೀಟರ್‌ಗಳಲ್ಲಿ, ನೋಂದಣಿ ಶುಲ್ಕ ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ನೋಂದಣಿ ಶುಲ್ಕ ಮತ್ತು ಆರಂಭಿಕ ಠೇವಣಿ ಹಣವನ್ನು Housing Commissioner, Karnataka Housing Board, Bangalore (Payable at Bangalore) ಇವರ ಹೆಸರಿನಲ್ಲಿ ಡಿಡಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಬ್ಯಾಂಕ್‌ಗಳಲ್ಲಿ ಆರಂಭಿಕ ಠೇವಣಿ ಹಣವನ್ನು ಪಾವತಿಸಬಹುದು.

ಸ್ವತ್ತುಗಳನ್ನು ಪ್ರವರ್ಗಗಳಲ್ಲಿ ಮೀಸಲಾತಿಯನ್ವಯ ಕಾಯ್ದಿರಿಸಿ ಹಂಚಿಕೆ ಮಾಡಲಾಗುತ್ತದೆ. ಆಯಾ ಪ್ರವರ್ಗವಾರು ಅಡಿಯಲ್ಲಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವವರು ಸಂಬಂಧಿಸಿದ ದೃಢೀಕೃತ ದಾಖಲಾತಿಯನ್ನು ಅರ್ಜಿಯನ್ನು ಸಲ್ಲಿಸಬೇಕು.

ಷರತ್ತುಗಳು ಏನು?

ಷರತ್ತುಗಳು ಏನು?

ಆರ್ಥಿಕ ದುರ್ಬಲ ವರ್ಗದ ನಿವೇಶನಗಳಿಗೆ ಅರ್ಜಿ ಸಲ್ಲಿಸುವವರು ತಮ್ಮ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದ ಅರ್ಜಿದಾರರು ರೂ. 32000 ಮತ್ತು ನಗರ ಪ್ರದೇಶದ ಅರ್ಜಿದಾರರು ತಮ್ಮ ಕುಟುಂಬದ ವಾರ್ಷಿಕ ವರಮಾನ 87,600 ಮೀರದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಜನರು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಗೃಹ ಮಂಡಳಿ, ಸೂರ್ಯ ನಗರ ಯೋಜನಾ ಕಚೇರಿ, ಸೂರ್ಯ ನಗರ ಬೆಂಗಳೂರು ಇವರನ್ನು ಖುದ್ದಾಗಿ ಅಥವ ದೂರವಾಣಿ ಮೂಲಕ ಸಂಪರ್ಕಿಸಬಹುದು. 9448373762/9886647084

English summary
Karnataka Housing Board invited the applications for the site and flat in Surya Nagar phase 4. People can apply till 16/1/2020 with application fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X