ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಮಾಲೀಕರು ಸಜ್ಜು
ಕೆಆರ್ ಎಸ್ ನಲ್ಲಿನ ಹೂಳು ತೆಗೆಯಬೇಕು ಹಾಗೂ ಆ ಹೂಳನ್ನು ಹೊತ್ತೊಯ್ಯಲು ಕರ್ನಾಟಕದ ಲಾರಿಗಳಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ಸಜ್ಜಾದ ಲಾರಿ ಮಾಲೀಕರ ಸಂಘ.
ಬೆಂಗಳೂರು, ಜೂನ್ 5: ಕೆಲವೇ ದಿನಗಳ ಹಿಂದೆ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದ ಲಾರಿ ಮಾಲೀಕರ ಸಂಘ ಶೀಘ್ರದಲ್ಲೇ ಮತ್ತೊಮ್ಮೆ ಅಂಥದ್ದೇ ಮುಷ್ಕರಕ್ಕೆ ಸಜ್ಜಾಗಿದ್ದಾರೆ.
ಕನ್ನಂಬಾಡಿಯಲ್ಲಿ ಹೂಳು ತೆಗೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಈ ಬಾರಿ ಮುಷ್ಕರಕ್ಕಿಳಿಯುತ್ತಿರುವುದಾಗಿ ಲಾರಿ ಮಾಲೀಕರ ಸಂಘ ಹೇಳಿದೆ.
ಇತ್ತೀಚೆಗೆ, ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನಲ್ಲಿ ಹೂಳು ತೆಗೆಸಲಾಗಿದೆ. ಆ ಹೂಳನ್ನು ಹೊತ್ತೊಯ್ಯಲು ಅಲ್ಲಿನ ಲಾರಿಗಳನ್ನು ಬಳಕೆ ಮಾಡಲಾಗಿದ್ದು, ಅದರಿಂದ ಅನೇಕ ಲಾರಿ ಚಾಲಕರು, ಮಾಲೀಕರಿಗೆ ಅನುಕೂಲವಾಗಿದೆ.
ಹಾಗಾಗಿ, ಕರ್ನಾಟದಲ್ಲಿರುವ ಕನ್ನಂಬಾಡಿ ಅಣೆಕಟ್ಟಿನ ಹೂಳು ತೆಗೆಸಲು ಸರ್ಕಾರ ಮುಂದಾಗಬೇಕಲ್ಲದೆ, ಆ ಹೂಳನ್ನು ಹೊತ್ತೊಯ್ಯಲು ಕರ್ನಾಟಕದ ಲಾರಿಗಳಿಗೇ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘದ ಮೂಲಗಳು ತಿಳಿಸಿವೆ.
Comments
English summary
Karnataka Lorry owners associations is planning to call for a strike for an indefinite time. This time they demand for the cleaning of silt of Kannambadi Dam and that Karnataka lorries should be allowed to transport that silt.
Story first published: Monday, June 5, 2017, 14:53 [IST]