ಆಂಬಿಡೆಂಟ್ ಹಗರಣ: ಚೆನ್ನೈನಿಂದ ಬೆಂಗಳೂರಿಗೆ ಚಿನ್ನ ಬಂದಿದ್ದು ಸತ್ಯ
ಬೆಂಗಳೂರು, ನವೆಂಬರ್ 28: ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಚೆನ್ನೈನಿಂದ ಬೆಂಗಳೂರಿಗೆ 3.5 ಕೋಟಿ ಮೌಲ್ಯದ ಚಿನ್ನ ಬಂದಿರುವುದು ಸತ್ಯ ಎನ್ನುವುದು ದಾಖಲೆಗಳ ಮೂಲಕ ಖಚಿತವಾಗಿದೆ.
ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್ಗೆ ಶರಣು
ಈ ಕುರಿತು ಸಿಸಿಬಿ ವಶದಲ್ಲಿರುವ ಅಲಿಖಾನ್ ವಿಚಾರಣೆಯನ್ನೂ ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಟ ಅಂಬರೀಶ್ ಅವರ ನಿಧನ ಮತ್ತು ಬಂದೋಬಸ್ತ್ ಕಾರ್ಯದಲ್ಲಿ ಎಲ್ಲಾ ಸಿಬ್ಬಂದಿಗಳು ತೊಡಗಿದ್ದರಿಂದ ಎರಡು ದಿನ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ.
ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು
ಆಂಬಿಡೆಂಟ್ ಕಂಪನಿ ಮಾಲೀಕ ಮತ್ತು ಜಿಯಾ ಎನ್ನುವ ವ್ಯಕ್ತಿ ಸೇರಿ ಚೆನ್ನೈ ಮೂಲದ ಟೋಕಿಯೋ ಇನ್ಫೋಟೆಕ್ ಕಂಪನಿಯಿಂದ ಚಿನ್ನವನ್ನು ತರಿಸಿ ಹಣ ವರ್ಗಾಯಿಸಿದ್ದರು.
ಆಂಬಿಡೆಂಟ್ ಕಂಪನಿ ಖಾತೆಯಿಂದ ಟೋಕಿಯೋ ಇನ್ಫೋಟೆಕ್ ಕಂಪನಿಗೆ ಹಣ ವರ್ಗಾವಣೆ ಆಗಿತ್ತು. ಈ ಹಣದ ಬದಲಿಗೆ ಅಷ್ಟೇ ಮೌಲ್ಯದ ಚಿನ್ನ ಆಂಬಿಡೆಂಟ್ ಕಂಪನಿ ವಿಳಾಸಕ್ಕೆ ಚೆನ್ನೈನಿಂದ ರವಾನೆಯಾಗಿತ್ತು.ಆದರೆ ಬೆಂಗಳೂರಿಗೆ ಬಂದ ಚಿನ್ನ ಎಲ್ಲಿಗೆ ಹೋಯಿತು ಎನ್ನುವುದು ಇನ್ನು ಬಹಿರಂಗಗೊಳ್ಳಬೇಕಿದೆ.