ಬೆಂಗಳೂರಲ್ಲಿ 8 ಕೋಟಿ ನಾಯಿ ಕಳವು; ಹುಡುಕಿಕೊಟ್ಟರೆ 1 ಲಕ್ಷ ಬಹುಮಾನ
ಬೆಂಗಳೂರು, ಡಿಸೆಂಬರ್ 22 : ಬೆಂಗಳೂರಿನಲ್ಲಿ ಮೂರುವರೆ ವರ್ಷದ ನಾಯಿ ಮರಿಯೊಂದು ಕಾಣೆಯಾಗಿದೆ. ನಾಯಿಯನ್ನು ಹುಡುಕಿಕೊಟ್ಟರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿ ಮರಿ ಬೆಂಗಳೂರಿನ ಶ್ರೀನಗರದಿಂದ ಕಾಣೆಯಾಗಿದೆ. ಕಳೆದ ಎರಡೂವರೆ ವರ್ಷಗಳ ಹಿಂದೆ ಚೀನಾದಿಂದ 8 ಕೋಟಿ ರೂ. ನೀಡಿದ ಬ್ರೀಡರ್ ಸತೀಶ್ ಈ ನಾಯಿ ಮರಿಯನ್ನು ತಂದಿದ್ದರು.
ಎನ್ಎಸ್ಜಿ ಪಡೆ ಸೇರಲಿವೆ ಬಾಗಲಕೋಟೆಯ ಮುಧೋಳ ನಾಯಿ
ಕೆಂಪು-ಬಿಳಿ ಬಣ್ಣ ಮಿಶ್ರಿತ ನಾಯಿ ಮರಿ ಡಿಸೆಂಬರ್ 5ರಂದು ಕಾಣೆಯಾಗಿದೆ. ನಾಯಿ ಮರಿ ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಸತೀಶ್ ಹೇಳಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ನಾಯಿ ಕಾಣೆಯಾದ ಬಗ್ಗೆ ದೂರು ನೀಡಲಾಗಿದೆ.
ಮೈಸೂರಿನಲ್ಲಿ ನಾಯಿ ಕದ್ದೊಯ್ಯುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿ ಭಾರತದಲ್ಲಿ ಇರುವುದು 3 ಮಾತ್ರ. ಅದರಲ್ಲಿ ಬೆಂಗಳೂರಿನಲ್ಲಿದ್ದ ನಾಯಿ ಕೂಡಾ ಒಂದಾಗಿತ್ತು. ಈಗ ಅದು ಕಾಣೆಯಾಗಿದ್ದು, ಮಾಲೀಕರು ನಾಯಿ ಪತ್ತೆಗೆ ಹರಸಾಹಸಪಡುತ್ತಿದ್ದಾರೆ.
ಕಬ್ಬನ್ಪಾರ್ಕಿನಲ್ಲಿ ನಾಯಿ ಗಲೀಜು ಮಾಡಿದ್ರೆ ಮಾಲಿಕರೇ ಸ್ವಚ್ಛ ಮಾಡ್ಬೇಕು
ಸತೀಶ್ ಅವರು ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಚೈನ್ ಸಮೇತ ಕಳ್ಳತನ ಮಾಡಲಾಗಿದೆ. ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿ ಹಸ್ಕಿ ತಳಿಯ ನಾಯಿಯಂತೆಯೇ ಕಾಣುತ್ತದೆ. ಆದರೆ, ಅದಕ್ಕಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ. ಚೀನಾದಲ್ಲಿ ಹೆಚ್ಚಾಗಿ ಈ ನಾಯಿಗಳು ಸಿಗುತ್ತವೆ.
ಸತೀಶ್ ನಾಯಿ ಹುಡುಕಲು ಪ್ರಯತ್ನಗಳನ್ನು ಮುಂದುವರಸಿದ್ದಾರೆ. ವಾಟ್ಸಪ್ ಗ್ರೂಪ್ಗಳಲ್ಲಿ ನಾಯಿಯ ಚಿತ್ರವನ್ನು ಹಾಕಿ ಮಾಹಿತಿ ಇದ್ದರೆ ನೀಡುವಂತೆ ಕೇಳುತ್ತಿದ್ದಾರೆ.