ಏಪ್ರಿಲ್ 25ಕ್ಕೆ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಉದ್ಘಾಟನೆ
ಬೆಂಗಳೂರು, ಏಪ್ರಿಲ್ 23: ಇದೇ ತಿಂಗಳ 25ನೇ ತಾರೀಕು, ಗುರುವಾರ ಬೆಳಗ್ಗೆ 8.30ಕ್ಕೆ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಚಾಮರಾಜಪೇಟೆಯಲ್ಲಿ ಇರುವ ಕೋಟೆ ಹೈಸ್ಕೂಲು ಮೈದಾನದಲ್ಲಿ ಸಮಾರಂಭ ನಿಗದಿಯಾಗಿದೆ.
ಉದ್ಘಾಟನೆ:
ಪೇಜಾವರ
ಅದೋಕ್ಷಜ
ಮಠದ
ಶ್ರೀಶ್ರೀ
ವಿಶ್ವೇಶತೀರ್ಥರು
ಉತ್ತರಾದಿ ಮಠದ ಶ್ರೀಶ್ರೀ ಸತ್ಯಾತ್ಮತೀರ್ಥ
ವ್ಯಾಸರಾಜ ಮಠದ ಶ್ರೀಶ್ರೀ ವಿದ್ಯಾಶ್ರೀಶ ತೀರ್ಥ
ಪೇಜಾವರ ಅದೋಕ್ಷಜ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ
ಮುಖ್ಯ
ಅತಿಥಿಗಳು:
ರಂಗಾಚಾರ್ಯ
ಗುತ್ತಲ್
ಸತ್ಯಧ್ಯಾನ ಆಚಾರ್ ಕಟ್ಟಿ
ಡಿ.ಪಿ.ಅನಂತಾಚಾರ್ಯರು
ಅತಿಥಿಗಳು:
ನಿವೃತ್ತ
ನ್ಯಾಯಮೂರ್ತಿ
ಎಂ.ಎನ್.ವೆಂಕಟಾಚಲಯ್ಯ
ತೇಜಸ್ವಿನಿ ಅನಂತ್ ಕುಮಾರ್
ರಾಘವೇಂದ್ರ ಔರಾದ್ಕರ್
ಭಾಸ್ಕರ್ ರಾವ್
ಕೆ.ಎನ್.ವೆಂಕಟನಾರಾಯಣ
ಆರ್.ಲಕ್ಷ್ಮೀಕಾಂತ್
ಎಸ್.ಎನ್.ವರದರಾಜ್
ಸುಬ್ಬನರಸಿಂಹ
ರಾಜ್ಯದಾದ್ಯಂತ ಇರುವ ಮಾಧ್ವ ಸಮುದಾಯದವರನ್ನು ಸಂಘಟಿತರಾಗಿ ಮಾಡಲು ಹಾಗೂ ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ನೆರವು ನೀಡುವ ಉದ್ದೇಶದಿಂದ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಸ್ಥಾಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಗುರುವಾರದಂದು ಮಾಧ್ವ ಸಮುದಾಯದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಪ್ರಯೋಜನ ಪಡೆಯಲು ಮನವಿ ಮಾಡಲಾಗಿದೆ.