ಫೆ.3 ರಿಂದ ಮೂರು ದಿನಗಳ ಕಾಲ ಏರ್ ಶೋ; ಇಂದು ಬೆಂಗಳೂರಿಗೆ ರಾಜನಾಥ್ ಸಿಂಗ್ ಆಗಮನ
ಬೆಂಗಳೂರು, ಫೆಬ್ರವರಿ 2: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆ.3 ರಿಂದ ಮೂರು ದಿನಗಳ ಕಾಲ "ಏರ್ ಶೋ' ನಡೆಯಲಿದ್ದು, "ಏರ್ ಜೋ" ಉದ್ಘಾಟನೆ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಫೆ.3 ರಿಂದ ಫೆ.5ರವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ಅದರ ಉದ್ಘಾಟನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. 3 ದಿನಗಳವರೆಗೂ ಬೆಂಗಳೂರಿನಲ್ಲಿಯೇ ಇರಲಿದ್ದಾರೆ.
ಕೊರೊನಾ ಭೀತಿಯ ನಡುವೆ ಈ ಬಾರಿಯ ಏರ್ ಶೋ ನಡೆಯಲಿದ್ದು, ಜನ ಸಂದಣಿಯನ್ನು ತಪ್ಪಿಸಲು ಆಸಕ್ತರಿಗೆ ಆ್ಯಪ್ ಮೂಲಕ ಉಚಿತ ಏರ್ ಶೋ ವೀಕ್ಷಣೆಗೆ ಅವಕಾಶ ನೀಡಿದ್ದಾರೆ.
Recommended Video
ಸೋಮವಾರದ ಕೇಂದ್ರ ಬಜೆಟ್ ನಲ್ಲಿ ರಕ್ಷಣಾ ಇಲಾಖೆ ಬಂಪರ್ ಗಿಫ್ಟ್ ಪಡೆದಿದ್ದು, ಒಟ್ಟು 4.78 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವೆಗೆ ಧನ್ಯವಾದ ತಿಳಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಮೂಲಕ ದೇಶೀಯವಾಗಿ ಯುದ್ಧ ಸಾಮಾಗ್ರಿ ತಯಾರಿಗೆ ಮಹತ್ವ ಕೊಡಲಾಗಿದೆ.