ಏರೋ ಇಂಡಿಯಾ: ನೈಸರ್ಗಿಕ ವಿಪತ್ತು ನಿರ್ವಹಣಾ ಮಾರ್ಗಸೂಚಿ ಪ್ರಕಟ
ಬೆಂಗಳೂರು, ಜನವರಿ 21: ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ನೈಸರ್ಗಿಕ ವಿಪತ್ತು ನಿರ್ವಹಣಾ ಮಾರ್ಗಸೂಚಿ ಪ್ರಕಟವಾಗಿರುವ ಕುರಿತು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ, ಏರೋ ಇಂಡಿಯಾ ಪ್ರದರ್ಶನದ ವೇಳೆ ಸಂಭವಿಸಬಹುದಾದ ಸುಮಾರು 10ಕ್ಕು ಹೆಚ್ಚು ಬಗೆಯ ವಿಪತ್ತುಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಏರೋ ಶೋ: ರಸ್ತೆ ದುರಸ್ತಿಗೆ ಜ.25ರವರೆಗೆ ಬಿಬಿಎಂಪಿ ಗಡುವು
ವಿಪತ್ತು ನಿರ್ವಹಣೆಗಾಗಿ ಒಬ್ಬ ಪ್ರತ್ಯೇಕ ಅಧಿಕಾರಿಯನ್ನೇ ನಿಯೋಜಿಸಿದ್ದೇವೆ,ಫೆಬ್ರವರಿ 3ರಿಂದ 5 ರ ವರೆಗೆ 2021 ಏರ್ ಷೋ ನಡೆಯಲಿದೆ,ಒಟ್ಟು 14 ರಾಷ್ಟ್ರಗಳ 541 ಪ್ರದರ್ಶಕರು ಭಾಗವಹಿಸಲಿದ್ದಾರೆ, 463 ಭಾರತೀಯ, 78 ವಿದೇಶಿ ಪ್ರದರ್ಶಕರು ಭಾಗವಹಿಸಲಿದ್ದಾರೆ,61 ವಿಮಾನಗಳು ಪ್ರದರ್ಶನಗೊಳ್ಳಲಿವೆ.
ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಹಳ್ಳಿಗೆ ನಡೆಯಿರಿ ಜಿಲ್ಲಾಧಿಕಾರಿಗಳೇ ಕಾರ್ಯಕ್ರಮ ಪುನರಾರಂಭಿಸಲಾಗುತ್ತಿದೆ.ತಿಂಗಳಿಗೊಮ್ಮೆ ಎಲ್ಲ ಜಿಲ್ಲಾಧಿಕಾರಿಗಳು ಹಾಗು ಕಂದಾಯ ಇಲಾಖೆ ಅದಿಕಾರಿಗಳು ಗ್ರಾಮವಾಸ್ತವ್ಯ ಮಾಡುವುದು ಕಡ್ಡಾಯಗೊಳಿಸಲಾಗಿದೆ.ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಮವಾಸ್ತವ್ಯ ಮಾಡುವುದು ಕಡ್ಡಾಯವಾಗಿದೆ.
ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನ ಆಗುವುದು ಸಹಜ,ಭಗವಂತನೇ ಬಂದರೂ ಎಲ್ಲರನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ.ಖಾತೆ ಹಂಚಿಕೆ ವಿಷಯದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸಿಎಂ ನಿರ್ಧಾರ ಮಾಡಿದ್ದಾರೆ.
Recommended Video
ಸಿಎಂ
ನಾಲ್ಕನೇ
ಬಾರಿಗೆ
ಸಿಎಂ
ಆಗಿರೋ
ಅನುಭವಿ.ಅವರಿಗೆ
ಯಾರು
ಯಾರಿಗೆ
ಏನೇನು
ಕೊಡಬೇಕು
ಏನು
ಮಾಡಬೇಕು
ಎಂದು
ಅವರಿಗೆ
ಚೆನ್ನಾಗಿ
ಗೊತ್ತು.
ನಾನು
ಈಗಾಗಲೇ
ಗೋಪಾಲಯ್ಯ,ಎಂಟಿಬಿ
ನಾಗರಾಜ್
ಅವರ
ಜತೆ
ಮಾತನಾಡಿದ್ದೇನೆ.ನಾನು
ಮತ್ತು
ಬಸವರಾಜ
ಬೊಮ್ಮಾಯಿ
ಅವರೆಲ್ಲರನ್ನು
ಭೇಟಿ
ಮಾಡಿ
ಮಾತುಕತೆ
ನಡೆಸಿ
ಸಮಾಧಾನ
ಪಡಿಸುತ್ತೇವೆ.