ಏರೋ ಇಂಡಿಯಾ 2019: ಸೂರ್ಯಕಿರಣ ಯುದ್ಧ ವಿಮಾನ ಪ್ರದರ್ಶನ ರದ್ದು
Recommended Video
ಬೆಂಗಳೂರು, ಫೆಬ್ರವರಿ 20: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸೂರ್ಯಕಿರಣ್ ಯುದ್ಧ ವಿಮಾನ ಪ್ರದರ್ಶನ ರದ್ದುಗೊಳಿಸಲಾಗಿದೆ.
ಏರೋ ಇಂಡಿಯಾ ದುರ್ಘಟನೆ : ವಿಂಗ್ ಕಮಾಂಡರ್ ಸಾಹಿಲ್ ಸಾವು
ಮಂಗಳವಾರ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರಯುಕ್ತ ನಡೆಸುತ್ತಿದ್ದ ತಾಲೀಮಿನ ಸಂದರ್ಭದಲ್ಲಿ ಎರಡು ಸೂರ್ಯಕಿರಣ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಮನೆಯೊಂದರ ಮೇಲೆ ಉರುಳಿತ್ತು. ಇಬ್ಬರು ಪೈಲಟ್ಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.
ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ
Bengaluru: IAF's Surya Kiran Aerobatics Team Aircraft standing with their canopies covered on runway behind the inaugural venue of #AeroIndia2019. The aircraft won’t participate in it due to the loss of two aircraft and one pilot yesterday in a mid-air collision during rehearsal. pic.twitter.com/96u9j5eTHZ
— ANI (@ANI) February 20, 2019
ಆದರೆ ಓರ್ವ ಪೈಲಟ್ ಸೋಹಿಲ್ ಗಾಂಧಿ ಎನ್ನುವವರು ಮೃತಪಟ್ಟಿದ್ದರು. ಹಾಗಾಗಿ ಫೆ. 20ರಿಂದ 24ರ ವರೆಗೆ ನಡೆಯುವ ವೈಮಾನಿಕ ಪ್ರದರ್ಶನದಲ್ಲಿ ಸೂರ್ಯ ಕಿರಣ್ ವಿಮಾನ ಹಾರಾಟ ನೋಡಲು ನಿಮಗೆ ಸಾಧ್ಯವಿಲ್ಲ.
ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ
ವಿಮಾನ ಡಿಕ್ಕಿಯಾಗುತ್ತಿದ್ದಂತೆ ಮೂವರು ಪೈಲಟ್ಗಳು ಪ್ಯಾರಾಚೂಟ್ ಮೂಲಕ ಜಿಗಿದಿದ್ದರು. ಮೂವರಲ್ಲಿ ವಿಜಯ್ ಶೆಲ್ಕೆ ಹಾಗೂ ತೇಜೇಶ್ವರ್ ಸಿಂಗ್ ಪಾರಾಗಿದ್ದು, ಅವರನ್ನು ಏರ್ಲಿಫ್ಟ್ ಮೂಲಕ ಹೆಚ್ಎಎಲ್ ಬಳಿಯಿರುವ ಕಮಾಂಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಯಿತು.