ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂರ್ಯಕಿರಣ್ ಯುದ್ಧ ವಿಮಾನ ಡಿಕ್ಕಿ: ಏರ್‌ ಶೋ ತಾಲೀಮು ರದ್ದು

|
Google Oneindia Kannada News

ಬೆಂಗಳೂರು, ಫೆಬ್ರವರಿ19: ಯಲಹಂಕದ ವಾಯುನೆಲೆಯ ಸಮೀಪ ಏರೋ ಇಂಡಿಯಾ ಶೋಗಾಗಿ ತಾಲೀಮಿನಲ್ಲಿ ತೊಡಗಿದ್ದ ಸೂರ್ಯಕಿರಣ್ ಯುದ್ಧ ವಿಮಾನ ಡಿಕ್ಕಿಯಾದ ಪರಿಣಾಮ ಎಲ್ಲಾ ಯುದ್ಧ ವಿಮಾನಗಳ ತಾಲೀಮುಗಳನ್ನು ರಕ್ಷಣಾ ಇಲಾಖೆ ರದ್ದುಗೊಳಿಸಿದೆ.

ಏರೋ ಇಂಡಿಯಾ 2019 ಉಕ್ಕಿನ ಹಕ್ಕಿಗಳ ಕಲರವ

ಸೂರ್ಯಕಿರಣ್ ಎರಡು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ನೆಲಕ್ಕುರುಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಓರ್ವ ವಿಂಗ್ ಕಮಾಂಡರ್ ಸಾಹಿಲ್ ಮೃತಪಟ್ಟಿದ್ದಾರೆ.

ಏರೋ ಇಂಡಿಯಾ ದುರ್ಘಟನೆ : ವಿಂಗ್ ಕಮಾಂಡರ್ ಸಾಹಿಲ್ ಸಾವು ಏರೋ ಇಂಡಿಯಾ ದುರ್ಘಟನೆ : ವಿಂಗ್ ಕಮಾಂಡರ್ ಸಾಹಿಲ್ ಸಾವು

ವಿಮಾನ ಡಿಕ್ಕಿಯಾಗುತ್ತಿದ್ದಂತೆ ಮೂವರು ಪೈಲಟ್​ಗಳು ಪ್ಯಾರಾಚೂಟ್ ಮೂಲಕ ಜಿಗಿದಿದ್ದರು. ಮೂವರಲ್ಲಿ ವಿಜಯ್​ ಶೆಲ್ಕೆ ಹಾಗೂ ತೇಜೇಶ್ವರ್ ಸಿಂಗ್​ ಪಾರಾಗಿದ್ದು, ಅವರನ್ನು ಏರ್​ಲಿಫ್ಟ್​ ಮೂಲಕ ಹೆಚ್ಎಎಲ್ ಬಳಿಯಿರುವ ಕಮಾಂಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Aero india 2019 Rehearsal cancelled duto aircrash in Yalahanka

ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ

ನಾಳೆ ಆರಂಭವಾಗುವ ಏರೋ ಶೋ ಇಂಡಿಯಾಗೆ ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿದ್ದವು. ಆದರೆ, ಇಂದು ನಡೆದ ಅವಘಡದಿಂದ ತಾಲೀಮು ರದ್ದುಪಡಿಸಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಅಧಿಕೃತವಾಗಿ ಏರೋ ಶೋಗೆ ಚಾಲನೆ ನೀಡಲಾಗುತ್ತದೆ.

English summary
Aero india india show rehearsal cancelled due to air crash of Surya kiran Aerobatics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X