ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಮಾನಿಕ ಜೈವಿಕ ಸೋಂಕುನಿವಾರಕ ಸಿಂಪಡಣೆ; ಏರಿಯಲ್‌ ವರ್ಕ್ಸ್‌ ಏರೋ ಸಂಸ್ಥೆ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮೇ 31: ಮೇ 29ರಂದು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಲ್ಲಿ ವೈಮಾನಿಕ ಜೈವಿಕ ಸೋಂಕು ನಿವಾರಕ ಸಿಂಪಡಣೆಯ ಪ್ರಾಯೋಗಿಕ ಕಾರ್ಯಾಚರಣೆ ಉದ್ಘಾಟನೆ ಸಂದರ್ಭ ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಲಾಗಿದೆ. ಅಲ್ಲದೆ, ಈ ಪ್ರಾಯೋಗಿಕ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಸರ್ಕಾರಿ ಇಲಾಖೆಗಳಿಂದಲೂ ಅನುಮತಿ ಪಡೆದುಕೊಳ್ಳಲಾಗಿತ್ತು ಎಂದು ಏರಿಯಲ್‌ ವರ್ಕ್ಸ್‌ ಏರೋ ಸಂಸ್ಥೆ ಸ್ಪಷ್ಟನೆ ನೀಡಿದೆ.

ಶನಿವಾರ ಉದ್ಘಾಟನೆಯಾದ ವೈಮಾನಿಕ ಜೈವಿಕ ಸೋಂಕು ನಿವಾರಕ ಸಿಂಪಡಣೆಯ ಪ್ರಾಯೋಗಿಕ ಕಾರ್ಯಾಚರಣೆ ನಂತರ ಉದ್ಭವಿಸಿದ್ದ ಕೆಲವು ಪ್ರಶ್ನೆಗಳಿಗೆ ಸಂಸ್ಥೆ ಉತ್ತರ ನೀಡಿದ್ದು, ಪೂರಕ ದಾಖಲೆಗಳನ್ನು ಒದಗಿಸಿದೆ.

 ಬೆಂಗಳೂರಿನಲ್ಲಿ 3 ದಿನಗಳ ಕಾಲ ವೈಮಾನಿಕ ಜೈವಿಕ ಸೋಂಕು ನಿವಾರಕ ಸಿಂಪಡಣೆ ಬೆಂಗಳೂರಿನಲ್ಲಿ 3 ದಿನಗಳ ಕಾಲ ವೈಮಾನಿಕ ಜೈವಿಕ ಸೋಂಕು ನಿವಾರಕ ಸಿಂಪಡಣೆ

ಉದ್ಘಾಟನಾ ಕಾರ್ಯಕ್ರಮದ ಸಂದರ್ಭ ವಿಮಾನ ಹಾರಾಟ ನಡೆಸಲು ಡಿಜಿಸಿಎಯಿಂದ ಅನುಮತಿ ಪಡೆದುಕೊಳ್ಳಲಾಗಿತ್ತು ಮತ್ತು ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಹಾರಾಟ ನಿಯಮಾವಳಿಗಳನ್ನು ಪಾಲಿಸಲಾಗಿತ್ತು. ಈ ಜೈವಿಕ ಸೋಂಕು ನಿವಾರಕದ ಸಿಂಪಡಣೆ 1000 ಅಡಿಗಳ (1000 feet AGL as per DGCA approved SOP) ಎತ್ತರದಲ್ಲಿ ಡಿಜಿಸಿಎ ಅನುಮತಿ ನೀಡಿರುವ ನಿಯಮಾವಳಿಗಳ ಪ್ರಕಾರ ನಡೆಯಲಿದೆ ಎಂದು ಮಾಹಿತಿ ನೀಡಿದೆ.

Aerialworks Aero Lmtd Clarifications On Aerial Spraying of Organic Disinfectant

ವೈಮಾನಿಕ ಸಿಂಪಡಣೆ ಕಾರ್ಯದಲ್ಲಿ ಬಳಸಲಾಗುವ ದ್ರಾವಣಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಅವು ಈ ಕೆಳಗಿನಂತಿದೆ...

1. ಪೆರ್‌ಸಾಪಿಏನ್ ಸೂಪರ್‌ ಐಯೋಡೈಸಡ್‌ ವಾಟರ್‌ (PerSapien Super Iodized Water): ಇದು ಐಸಿಎಂಆರ್‌ನಿಂದ ಮಾನ್ಯತೆ ಪಡೆದಿರುವ ಸೋಂಕು ನಿವಾರಕ ದ್ರಾವಣವಾಗಿದೆ. ಅಲ್ಲದೆ ಇದರ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗಿದ್ದು ಇದನ್ನು ಚರ್ಮ, ಮೇಲ್ಮೈಗಳ (Surfaces) ಮೇಲೆ ಬಳಸಲು ಅನುಮತಿ ನೀಡಲಾಗಿದೆ. ಅಲ್ಲದೆ ಇದು ಐಐಆರ್‌ಟಿ (IIRT) ಸಂಸ್ಥೆಯಿಂದಲೂ ಒಪ್ಪಿಗೆ ಪಡೆದಿದೆ ಎಂದಿದೆ.

2. ಸುಗರ್ಧನಾ ಆಂಟಿ ಮೈಕ್ರೋಬಿಯಲ್ ಡಿಸ್‌ಇನ್‌ಫೆಕ್ಟೆಂಟ್‌ ಸೊಲ್ಯೂಶನ್‌ (Sugaradhana Antimicrobial Disinfectant solution): ಈ ಸೋಂಕು ನಿವಾರಣಾ ದ್ರಾವಣವನ್ನು ಐಸಿಎಚ್‌ (ICH) ನಿಯಮಾವಳಿಗಳ ಪ್ರಕಾರ ಪರೀಕ್ಷಿಸಲಾಗಿದ್ದು, ಚರ್ಮದ ಮೇಲೆ ಇದು ದುಷ್ಪರಿಣಾಮ ಬೀರುವುದಿಲ್ಲ ಎನ್ನುವುದರ ಬಗ್ಗೆ ರೇಡಿಯಂಟ್‌ ರೀಸರ್ಚ್‌ (Radiant Research and other organic govt bodies) ಮತ್ತಿತರ ಸರಕಾರಿ ಸಂಸ್ಥೆಗಳು ಪ್ರಮಾಣ ಪತ್ರ ನೀಡಿವೆ. ಈ ದ್ರಾವಣವನ್ನೇ ಬಿಬಿಎಂಪಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಕೊರೊನಾ ನಿಯಂತ್ರಿಸಲು ಸಿಂಪಡನೆ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.

3. ರಾಜ್ಯದಲ್ಲಿನ ಕೋವಿಡ್‌ ಪರಿಸ್ಥಿತಿ ಅನುಸಾರವಾಗಿ ಏರಿಯಲ್‌ ವರ್ಕ್ಸ್‌ ಏರೋ ಎಲ್‌ ಎಲ್‌ ಪಿ ತನ್ನ ಪ್ರಸ್ತಾವನೆ ಸಲ್ಲಿಸಿತ್ತು. ಏರಿಯಲ್‌ / ವೈಮಾನಿಕವಾಗಿ ಕೃಷಿ ಸಿಂಪಡಣಾ ಕಾರ್ಯ ವಿಶ್ವದ ಬಹುಭಾಗಗಳಲ್ಲಿ ಉಪಯೋಗಿಸಲಾಗುತ್ತಿರುವ ಪರಿಣಾಮಕಾರಿ ವಿಧಾನ. ಈ ವಿಧಾನವನ್ನು ಬಳಸಿಕೊಂಡು ಬಿಬಿಎಂಪಿ/ಸರ್ಕಾರಕ್ಕೆ ಯಾವುದೇ ಹೊರೆ ಇಲ್ಲದೆ ಪ್ರಾಯೋಗಿಕ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲು ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದೆ.

4. ಸಿಡಿಸಿ (CDC) ಗಾಳಿಯಿಂದ ಹರಡುವ ಕಾಯಿಲೆ ಎನ್ನುವ ಬಗ್ಗೆ ಬಹಳಷ್ಟು ವೈಜ್ಞಾನಿಕ ಪುರಾವೆಗಳಿವೆ. ಇದಕ್ಕಾಗಿ ಹಲವಾರು ದೇಶಗಳಲ್ಲಿ ವೈಮಾನಿಕವಾಗಿ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಿರುವ ಉದಾಹರಣೆಗಳು ಇವೆ. ಈ ಹಿನ್ನಲೆಯಲ್ಲೇ ವಿಶ್ವದಾದ್ಯಂತ ಸರ್ಕಾರಗಳು ಮಾಸ್ಕ್‌ ಧಾರಣೆಯ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿರುವುದು.

5. 60%ರಷ್ಟಾದರೂ ಆಲ್ಕೋಹಾಲ್ ಹೊಂದಿರುವ ಸೋಂಕು ನಿವಾರಕಗಳಷ್ಟೇ ಪರಿಣಾಮಕಾರಿ ಎಂದು ಹೇಳಲಾಗಿದೆ. ಆದರೆ, ಸೋಂಕು ನಿವಾರಕ ಆಲ್ಕೋಹಾಲ್ ಇಲ್ಲದೆಯೋ ಕಾರ್ಯನಿರ್ವಹಿಸುತ್ತದೆ.

6. ಬೆಂಗಳೂರಿನಲ್ಲಿ ಜನಸಾಂದ್ರತೆಯನ್ನು ಮಾನದಂಡವಾಗಿ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

7. ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿ, ಪೆರ್‌ಸೇಪಿಯನ್‌ ಮತ್ತು ಸುಗರ್ಧನ ಈ ಪ್ರಾಯೋಗಿಕ ಕಾರ್ಯಾಚರಣೆಯನ್ನು ಯಾವುದೇ ಶುಲ್ಕವಿಲ್ಲದೆ ನಡೆಸುತ್ತಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

Recommended Video

Jayalalithaa ನಂತರ ನಾನೇ CM | Sasikala | Oneindia Kannada

English summary
Aerialworks Aero Lmtd has give clarifications on its Aerial Spraying of Organic Disinfectant pilot project which was launched on may 29,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X