ಬೆಂಗಳೂರಿನ 6 ಕೆರೆಗಳನ್ನು ದತ್ತು ಪಡೆದ ಕಾರ್ಪೊರೇಟ್ ಕಂಪನಿಗಳು
ಬೆಂಗಳೂರು, ಮಾರ್ಚ್ 7: ನಗರದ ಬಹುತೇಕ ಕೆರೆಗಳು ಕಲುಷಿತಗೊಂಡು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಈ ಕೆರೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕಾರ್ಪೊರೇಟ್ ಕಂಪನಿಗಳು ಮುಂದಾಗಿವೆ.
ನಗರದಲ್ಲಿರುವ ಆರು ಕೆರೆಗಳನ್ನು ಕಾರ್ಪೊರೇಟ್ ಕಂಪನಿ ದತ್ತು ತೆಗೆದುಕೊಂಡಿದ್ದು, ಶೀಘ್ರ ಮರುಜೀವ ನೀಡಲಾಗುತ್ತದೆ.
ರಾಜ್ಯಕ್ಕೆ ಎನ್ಜಿಟಿ ಎದುರು ಭಾರಿ ಮುಖಭಂಗ: 75 ಕೋಟಿ ದಂಡ
ಬಯೋಕಾನ್ ಇಂಡಿಯಾ ಖಾಸಗಿ ಸಹಭಾಗಿತ್ವದೊಂದಿಗೆ ಬೊಮ್ಮಸಂದ್ರದ ಬಳಿ ಇರುವ ಯಾರಂಡಹಳ್ಳಿ ಕೆರೆ, ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಮ್ಮಸಂದ್ರ ಕೆರೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಎಲೆಕ್ರಾನಿಕ್ಸ್ ಸಿಟಿ ಬಳಿ ಇರುವ ಶಿಕಾರಿಪಾಳ್ಯ ಕೆರೆಯನ್ನು ವಿಪ್ರೋ ಅಭಿವೃದ್ಧಿಪಡಿಸುತ್ತಿದೆ. ಕೆಂಚೇನಹಳ್ಳಿ ಕೆರೆಯನ್ನು ಮೆರಿಟರ್ ಸಂಸ್ಥೆ, ದೊಡ್ಡತೋಗೂರು ಕೆರೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ , ಮಾರಗೊಂಡನಹಳ್ಳಿ ಕೆರೆಯನ್ನು ಟೈಮ್ಕೆನ್ ಇಂಡಿಯಾ ಕಂಪನಿ ದತ್ತು ತೆಗೆದುಕೊಂಡಿದೆ.
ಸೆಪ್ಟಿಕ್ ಟ್ಯಾಂಕ್ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ
ಮುಂಬರುವ ದಿನಗಳಲ್ಲಿ ಬೆಂಗಳೂರಲ್ಲಿ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ, ಈಗಲೇ ಎಚ್ಚೆತ್ತುಕೊಂಡು ಕೆರೆಯನ್ನು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಪರಿವರ್ತಿಸಿಕೊಳ್ಳದಿದ್ದರೆ ಮುಂದೆ ತೊಂದರೆ ಕಟ್ಟಿಟ್ಟ ಬುತ್ತಿ.
ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ
ಇನ್ನು ಹೆಚ್ಚು ಹೆಚ್ಚು ಕಾರ್ಪೊರೇಟ್ ಕಂಪನಿಗಳು ಕೆರೆಗಳ ಅಭಿವೃದ್ಧಿಗೆ ಮುಂದೆ ಬರಬೇಕು. ಬಯೋಕಾನ್ ಹಾಗೂ ವಿಪ್ರೋ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರವು ಶೀಘ್ರ ಕ್ಲೀನ್ ಏರ್ ಯೋಜನೆಯನ್ನು ಜಾರಿಗೆ ತರುತ್ತದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ತಿಳಿಸಿದ್ದಾರೆ.