ಕಸ ಸಮಸ್ಯೆಗೆ ಆಡಳಿತಾತ್ಮಕ ವೈಫಲ್ಯ ಕಾರಣ
ವಿಧಾನಸೌಧದಲ್ಲಿ ಮಂಡೂರಿನಲ್ಲಿ ಕಸ ವಿಲೇವಾರಿಗೆ ಗ್ರಾಮಸ್ಥರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರಿಯಾಗಿ ಕಸ ವಿಲೇವಾರಿ ಮಾಡದೇ ಮಂಡೂರಿನ ಗ್ರಾಮಸ್ಥರನ್ನು ದೂರುವುದು ಸರಿಯಲ್ಲ. ವೈಜ್ಞಾನಿಕವಾಗಿ ಕಸ ವಿಲೇವಾರಿಯಾಗದ ಕಾರಣ ಸಮಸ್ಯೆ ಉಂಟಾಗಿದೆ. ಕಸದ ಸಮಸ್ಯೆ ನಿವಾರಣೆಯಲ್ಲಿ ಆಡಳಿತ ವೈಫಲ್ಯವಿದೆ ಎಂದು ತಿಳಿಸಿದರು.[ಮಂಡೂರು ಕ್ಷೇತ್ರದ ಡಂಪಿಂಗ್ ಸ್ವಾಮಿ ಮಹಾತ್ಮೆ]
ಮಂಡೂರಿನಲ್ಲಿ ಉಂಟಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು ಕಸ ವಿಲೇವಾರಿಗಾಗಿ ಖಾಲಿ ಜಾಗ ಹುಡುಕುತ್ತಿದ್ದೇವೆ. ಆದರೆ ಜಾಗ ಗೊತ್ತಾದ ತಕ್ಷಣ ಪಟ್ಟಭದ್ರಹಿತಾಸಕ್ತಿಗಳು ಆ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಕಸ ಸಮಸ್ಯೆಯ ಶಾಶ್ವತ ನಿವಾರಣೆಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.
ಸಭೆ
ವಿಫಲ:
ಗೃಹ
ಕಚೇರಿ
ಕೃಷ್ಣಾದಲ್ಲಿ
ಜೂ.13.
ಶುಕ್ರವಾರ
ಸಂಜೆ
3
ಗಂಟೆಗೆ
ಮಂಡೂರು
ಗ್ರಾಮಸ್ಥರು
ಜೊತೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ನಡೆಸಿದ
ಸಭೆ
ವಿಫಲವಾಗಿದೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಮತ್ತೆ
ಆರು
ತಿಂಗಳ
ಕಾಲ
ಕಸವನ್ನು
ಹಾಕುವಂತೆ
ಮಂಡೂರು
ಗ್ರಾಮಸ್ಥರ
ಮನವೊಲಿಕೆ
ಪ್ರಯತ್ನ
ವಿಫಲವಾಗಿದ್ದು,
ಮುಖ್ಯಮಂತ್ರಿಯವರ
ಮನವಿಯನ್ನು
ಗ್ರಾಮಸ್ಥರು
ತಿರಸ್ಕರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಕರೆಯಲಾದ ಹಿನ್ನಲೆಯಲ್ಲಿ ಶುಕ್ರವಾರದಿಂದ ಮಂಡೂರಿನಲ್ಲಿ ತ್ಯಾಜ್ಯ ವಿಲೇವಾರಿ ವಿರೋಧಿಸಿ ಕೈಗೊಳ್ಳಬೇಕಿದ್ದ ಉಪವಾಸ ಸತ್ಯಾಗ್ರಹವನ್ನು ಗ್ರಾಮಸ್ಥರು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದರು.