ವಿಷ್ಣು ಸ್ಮಾರಕ್ಕಾಗಿ ಮುಂದುವರೆದ ಭಾರತಿ ಹೋರಾಟ, ಕುಮಾರಸ್ವಾಮಿಗೆ ಮನವಿ
ಬೆಂಗಳೂರು, ಜೂನ್ 05: ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಹೋರಾಟವನ್ನು ಮುಂದುವರೆಸಿರುವ ನಟಿ ಭಾರತಿ ಅವರು ಇಂದು ಹೊಸ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅಳಿಯ ಅನಿರುದ್ಧ ಜೊತೆಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಟಿ ಭಾರತಿ ಅವರು ತಮ್ಮ ಪತಿ, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರು.
ಮೈಸೂರಿನ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕೋರ್ಟ್ ನಿಂದ ತಾತ್ಕಾಲಿಕ ತಡೆಯಾಜ್ಞೆ
ಬೆಂಗಳೂರಲ್ಲಿ ವಿಷ್ಣು ಸ್ಮಾರಕಕ್ಕಾಗಿ ಮೀಸಲಿಟ್ಟಿರುವ ಜಾಗದ ಕುರಿತು ತಕರಾರು ಎದ್ದಿದ್ದು ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿಕೊಡಿ ಎಂದು ಭಾರತಿ ಅವರು ಕುಮಾರಸ್ವಾಮಿ ಅವರನ್ನು ಕೇಳಿದ್ದಾರೆ.
ಸಂಪುಟ ವಿಸ್ತರಣೆ ಸೇರಿದಂತೆ ಮತ್ತಿತರ ತುರ್ತು ಕಾರ್ಯಗಳು ಆಗಬೇಕಿದ್ದು ಅವುಗಳು ಸಂಪೂರ್ಣವಾದ ನಂತರ ಈ ಬಗ್ಗೆ ಗಮನವಹಿಸುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.
ವಿಷ್ಣುವರ್ಧನ್ ಅವರು ತೀರಿಕೊಂಡಾಗಿನಿಂದಲೂ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಭಾರತಿ ಅವರು ಪ್ಯತ್ನ ಮಾಡುತ್ತಲೇ ಇದ್ದಾರೆ ಆದರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ.