'ಅದೃಷ್ಟ'ದ ಮನೆ ತೊರೆಯಲು ಸಿದ್ಧರಾದ ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು, ಜೂನ್ 07: ರಾಕಿಂಗ್ ಸ್ಟಾರ್ ಯಶ್ಅವರ ಕತ್ರಿಗುಪ್ಪೆ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ಅಂತ್ಯಗಾಣುತ್ತಿದೆ. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ವಿಧಿಯಿಲ್ಲದೆ ತಮ್ಮ ಅದೃಷ್ಟದ ಮನೆಯನ್ನು ತೊರೆಯಲು ಯಶ್ ನಿರ್ಧರಿಸಿದ್ದಾರೆ.
ಈ ಕುರಿತಂತೆ ಮನೆ ಬಾಡಿಗೆಯನ್ನು ಮಾಲೀಕರಿಗೆ ಪಾವತಿಸಿದ್ದಾರೆ. ಮಿಕ್ಕ ಮೊತ್ತವನ್ನು ಕೋರ್ಟಿನ ಆದೇಶದಂತೆ ಸೆಟ್ಲ್ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
42ನೇ ಸಿಟಿ ಸಿವಿಎಲ್ ನ್ಯಾಯಾಲಯವು ಏಪ್ರಿಲ್ ತಿಂಗಳಿನಲ್ಲಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಮನೆ ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ನಟ ಯಶ್ ತಾಯಿಗೆ ನಿರ್ದೇಶಿಸಿತ್ತು.
ಯಶ್ ಅಲ್ಲದಿದ್ದರೆ, ಸ್ಲಂ ಭರತ್ ಗ್ಯಾಂಗ್ ಸ್ಕೆಚ್ ಹಾಕಿದ್ದು ಯಾರಿಗೆ?
ಹೀಗಾಗಿ, 23.27 ಲಕ್ಷ ರೂ. ಬಾಡಿಗೆ ಪಾವತಿಸಿ, ಮುಂದಿನ ಮೇ 31ರ ವರೆಗೆ ಇರಬಹುದಾಗಿತ್ತು. ಇದಕ್ಕೂ ಮುನ್ನ ನೀಡಿದ ಆದೇಶದಂತೆ ಬಾಡಿಗೆ ಹಣ ನೀಡಿ, ಡಿಸೆಂಬರ್ ತಿಂಗಳೊಳಗೆ ಖಾಲಿ ಮಾಡಬೇಕಾಗಿತ್ತು.
ಹುಟ್ಟೂರಿನಲ್ಲಿ ತೋಟ, ಮನೆ ಖರೀದಿಸಿದ ಯಶ್, ರೈತ ಮಿತ್ರನಾಗುವತ್ತ!
ಕೋರ್ಟ್ ಆದೇಶದಂತೆ ಯಶ್, ತಮ್ಮ ಪರ ವಕೀಲರ ಮೂಲಕ ಮನೆಯ ಕೀ ಹಾಗೂ ಎರಡು ತಿಂಗಳು ಬಾಡಿಗೆ ಮೊತ್ತವನ್ನು ಡಿಡಿ ರೂಪದಲ್ಲಿ ನೀಡಿ ಮನೆ ಮಾಲೀಕರ ವಕೀಲರಿಗೆ ತಲುಪಿಸಿದ್ದಾರೆ.
ಮನೆ ಮಾಲೀಕರ ಪರ ವಕೀಲ ಎಂಟಿ ನಾಣಯ್ಯ
ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಯಶ್ ಅವರ ಪರ ವಕೀಲರಾದ ಜೀವನ್ ಅವರು ಮನೆ ಕೀ ಹಾಗೂ ಡಿಡಿಯನ್ನು ತಲುಪಿಸಿದ್ದಾರೆ. ಕೀ ಪಡೆದು ಮನೆಯನ್ನು ಒಮ್ಮೆ ಪರಿಶೀಲಿಸಲಾಗುವುದು ನಂತರ ಮನೆ ವಶಕ್ಕೆ ಪಡೆದು ನಮ್ಮ ಕಕ್ಷಿದಾರರಿಗೆ ಒಪ್ಪಿಗೆಯಾದ ಬಳಿಕ ಕೋರ್ಟಿಗೆ ಈ ಬಗ್ಗೆ ತಿಳಿಸಲಾಗುವುದು ಎಂದಿದ್ದಾರೆ.
ಯಶ್ ಅವರ ಕುಟುಂಬ ಬಾಡಿಗೆ ನೀಡಿಲ್ಲ ಎಂಬ ದೂರು
ಯಶ್ ಅವರ ಕುಟುಂಬ ಬಾಡಿಗೆ ನೀಡಿಲ್ಲ. ಅಲ್ಲದೇ ಅವರು ಬೇರೆ ಮನೆಯಲ್ಲಿ ವಾಸವಾಗಿದ್ದರೂ, ಬೀಗವನ್ನು ಹಾಕಿ ಬಾಡಿಗೆ ಮನೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಬನಶಂಕರಿ ಮೂರನೇ ಹಂತ ಕತ್ರಿಗುಪ್ಪೆಯಲ್ಲಿರುವ ಮನೆಯ ಮಾಲೀಕ ಮುನಿಪ್ರಸಾದ್ ಹಾಗೂ ಡಾ. ವನಜಾ ದಂಪತಿ ಅವರು ಯಶ್ ಕುಟುಂಬದ ವಿರುದ್ಧ ಆರೋಪ ಹೊರೆಸಿ, ಕೋರ್ಟ್ ಮೆಟ್ಟಿಲೇರಿದ್ದರು.
ಏನಿದು ಮನೆ ಬಾಡಿಗೆ ವಿವಾದ
ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್ ಕತ್ರಿಗುಪ್ಪೆಯಲ್ಲಿರುವ ಮನೆ ನಂಬರ್ 757 ರಲ್ಲಿ 2010ರಿಂದ ನಟ ಯಶ್ ಬಾಡಿಗೆಗೆ ವಾಸವಾಗಿದ್ದರು. ಅಂದು ಮಾಡಿಕೊಂಡಿದ್ದ ಬಾಡಿಗೆ ಕರಾರಿನ ಪ್ರಕಾರ 40 ಸಾವಿರ ರೂ.ಗೆ ನಟ ಯಶ್ ತಾಯಿ ಪುಷ್ಪಾ ಬಾಡಿಗೆ ಮನೆ ಪಡೆದುಕೊಂಡಿದ್ದರು. ಒಂದು ವರ್ಷದವರೆಗೆ ಬಾಡಿಗೆ ನೀಡಿದ್ದ ಯಶ್ ಕುಟುಂಬ, ನಂತರ ಬಾಡಿಗೆ ನೀಡಿಲ್ಲ ಎಂದು ಮುನಿಪ್ರಸಾದ್ ಆರೋಪಿಸಿದ್ದರು.
ಯಶ್ ಮಾರ್ಗವೇ ಬೇರೆ
ಯಶ್ ಅವರು ತಮ್ಮ ಹುಟ್ಟೂರಾದ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ತೋಟ ಮನೆ ಖರೀದಿಸಿದ್ದಾರೆ. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡುವುದಷ್ಟೇ ಅಲ್ಲದೆ, ಅಲ್ಲಿನ ರೈತರಿಗೆ ಈ ಬಗ್ಗೆ ಅರಿವು ಮೂಡಿಸುವ ಯತ್ನದಲ್ಲಿದ್ದಾರೆ. ಹೊಸಕೆರೆಹಳ್ಳಿಯಲ್ಲಿ ಒಂದು ಮನೆ ಇದೆ, ಆನಂದ್ ರಾವ್ ಸರ್ಕಲ್ ಬಳಿ ಅಂಬರೀಷ್ ಪ್ರೀತಿಯಿಂದ ಪಡೆದ ಅಪಾರ್ಟ್ಮೆಂಟ್ ಇದೆ. ಆದರೆ, ಲಕ್ಕಿ ಎಂಬ ಕಾರಣಕ್ಕೆ ಈ ಮನೆಯನ್ನು ಬಿಟ್ಟಿರಲಿಲ್ಲ