Rally for Rivers ಪರ ನಟ ಗಣೇಶ್ ಅಭಿಯಾನ
ಬೆಂಗಳೂರು, ಆಗಸ್ಟ್ 04 : ಭಾರತದಲ್ಲಿ ಭವಿಷ್ಯದಲ್ಲಿ ಜಲಕ್ಷಾಮ ಎದುರಾಗಬಾರದು ಎಂಬ ಉದ್ದೇಶದಿಂದ ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ಅವರು Rally for Rivers ಆರಂಭಿಸಿದ್ದಾರೆ. ರಾಷ್ಟ್ರವ್ಯಾಪ್ತಿ ಈ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೈ ಜೋಡಿಸಿದ್ದು, ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನದಿಗಳನ್ನು ಉಳಿಸಲು ಇಡೀ ದೇಶದೆಲ್ಲೆಡೆ ನಡೆಯುತ್ತಿರುವ 'Rally for river ' ಜಾಗೃತಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 80009 80009 ಫೋನ್ ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟು ನಿಮ್ಮ ಬೆಂಬಲ ವ್ಯಕ್ತಪಡಿಸಬಹುದು.
ಈ ಜಾಗೃತಿ ಅಭಿಯಾನಕ್ಕೆ ಹಲವಾರು ನಟ, ನಟಿಯರು ಸೇರಿದಂತೆ ಲಕ್ಷಾಂತರ ಜನ ಕೈ ಜೋಡಿದ್ದಾರೆ. ಈ ಅಭಿಯಾನಕ್ಕೆ ಕೈ ಜೋಡಿಸಿರುವ ಗಣೇಶ್ ಅವರು ನೀವು ಕೂಡಾ ಪಾಲ್ಗೊಳ್ಳಿ, ಬೆಂಬಲಿಸಿ ಎಂದು ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಕೋರಿದ್ದಾರೆ.
Let's cme 2gether n support the cause.I👍🏻support #Rallyforriver
— Ganesh (@Official_Ganesh) August 3, 2017
Request you all to give missed call to 8000980009 @ishafoundation @Sadhguru pic.twitter.com/zLB7UpcD5L
ಅಂತರ್ಜಲ ಕುಸಿತ, ಜಲ ಸಂರಕ್ಷಣೆ, ನದಿಗಳ ಜೋಡಣೆ ಮೂಲಕ ಫಲವತ್ತತೆ ಕಾಯ್ದುಕೊಳ್ಳುವಿಕೆ, ಸೇರಿದಂತೆ ಅವಸಾನದ ಅಂಚಿಗೆ ಬಂದಿರುವ ನದಿಗಳ ರಕ್ಷಣೆಗಾಗಿ ಜಗ್ಗಿ ವಾಸುದೇವ್ ಗುರು ಅವರು Rally for River ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಇಶಾ ಫೌಂಡೇಶನ್ ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.