ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Rally for Rivers ಪರ ನಟ ಗಣೇಶ್ ಅಭಿಯಾನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 04 : ಭಾರತದಲ್ಲಿ ಭವಿಷ್ಯದಲ್ಲಿ ಜಲಕ್ಷಾಮ ಎದುರಾಗಬಾರದು ಎಂಬ ಉದ್ದೇಶದಿಂದ ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ಅವರು Rally for Rivers ಆರಂಭಿಸಿದ್ದಾರೆ. ರಾಷ್ಟ್ರವ್ಯಾಪ್ತಿ ಈ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೈ ಜೋಡಿಸಿದ್ದು, ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನದಿಗಳನ್ನು ಉಳಿಸಲು ಇಡೀ ದೇಶದೆಲ್ಲೆಡೆ ನಡೆಯುತ್ತಿರುವ 'Rally for river ' ಜಾಗೃತಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 80009 80009 ಫೋನ್ ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟು ನಿಮ್ಮ ಬೆಂಬಲ ವ್ಯಕ್ತಪಡಿಸಬಹುದು.

Actor Ganesh supports Rally for Rivers – Campaign by Sadhguru

ಈ ಜಾಗೃತಿ ಅಭಿಯಾನಕ್ಕೆ ಹಲವಾರು ನಟ, ನಟಿಯರು ಸೇರಿದಂತೆ ಲಕ್ಷಾಂತರ ಜನ ಕೈ ಜೋಡಿದ್ದಾರೆ. ಈ ಅಭಿಯಾನಕ್ಕೆ ಕೈ ಜೋಡಿಸಿರುವ ಗಣೇಶ್ ಅವರು ನೀವು ಕೂಡಾ ಪಾಲ್ಗೊಳ್ಳಿ, ಬೆಂಬಲಿಸಿ ಎಂದು ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಕೋರಿದ್ದಾರೆ.


ಅಂತರ್ಜಲ ಕುಸಿತ, ಜಲ ಸಂರಕ್ಷಣೆ, ನದಿಗಳ ಜೋಡಣೆ ಮೂಲಕ ಫಲವತ್ತತೆ ಕಾಯ್ದುಕೊಳ್ಳುವಿಕೆ, ಸೇರಿದಂತೆ ಅವಸಾನದ ಅಂಚಿಗೆ ಬಂದಿರುವ ನದಿಗಳ ರಕ್ಷಣೆಗಾಗಿ ಜಗ್ಗಿ ವಾಸುದೇವ್ ಗುರು ಅವರು Rally for River ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ಇಶಾ ಫೌಂಡೇಶನ್ ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.

English summary
Golden star Ganesh supports Rally for Rivers a nationwide campaign launched by Sadhguru, Isha foundation. Lakhs of people are already showing their support, and you can too! All it takes is a missed call to 80009 80009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X