ಕೈದಿಗಳಿಂದ ತುಂಬಿ ತುಳುಕುತ್ತಿರುವ ಜೈಲುಗಳು: ಪಿಐಎಲ್ ದಾಖಲು
ಬೆಂಗಳೂರು, ಜೂನ್ 8: ರಾಜ್ಯದ ಕಾರಾಗೃಹಗಳಲ್ಲಿ ನಿಗದಿಗಿಂತ ಹೆಚ್ಚು ಸಂಖ್ಯೆ ಕೈದಿಗಳನ್ನು ಇರಿಸುವುದು ಹಾಗೂ ಅಗತ್ಯಕ್ಕಿಂತಲೂ ಕಡಿಮೆ ಸಿಬ್ಬಂದಿ ಇರುವುದನ್ನು ಪ್ರಶ್ನಿಸಿ ಹೈಕೋರ್ಟ್ನ ರಿಜಿಸ್ಟ್ರಾರ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ.
ದೇಶದ ಕಾರಾಗೃಹಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅವಿಹಾತವಾಗಿ ಆಗುತ್ತಿದ್ದು, ಈ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ ಅನುಸಾರ ಹೈಕೋರ್ಟ್ನಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಜೈಲು ಅಧೀಕ್ಷಕರ ಮೇಲೆಯೇ ಹಲ್ಲೆ ನಡೆಸಿದ ಕೈದಿಗಳು
ದೇಶದಲ್ಲಿ ಪ್ರತಿ ಕಾರಗೃಹದಲ್ಲಿ ಇಂತಿಷ್ಟೇ ಕೈದಿಗಳನ್ನು ಇರಿಸಬೇಕು ಹಾಗೂ ಜೈಲುಗಳ ನಿರ್ವಹಣೆಗೆ ಕನಿಷ್ಠ ಸಿಬ್ಬಂದಿ ಇರಿಸಬೇಕೆಂಬ ನಿರ್ದೇಶನದ ಅನುಸಾರ ದೇಶದ ಯಾವುದೇ ರಾಜ್ಯದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಕೈದಿಗಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಕೈದಿಗಳನ್ನು ಸರಿಯಾಗಿ ನಡೆಸುಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿತ್ತು. ಈ ಕುರಿತು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು.
ದೇಶದಲ್ಲಿರುವ ಎಲ್ಲಾ ಜೈಲುಗಳ ಸಮಸ್ಯೆಯನ್ನು ಆಲಿಸಿರುವ ಸುಪ್ರೀಂಕೋರ್ಟ್ ಆಯಾ ರಾಜ್ಯಗಳ ಹೈಕೋರ್ಟ್ಗೆ ಆಯಾ ರಾಜ್ಯಗಳಲ್ಲಿನ ಜೈಲಿನ ಪರಿಸ್ಥಿತಿ ಕುರಿತ ಸುಧಾರಣೆ ಕುರಿತಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ.