ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಸಂಪೂರ್ಣ ಬೆಂಬಲ
ಬೆಂಗಳೂರು, ನವೆಂಬರ್ 03: ಕಬ್ಬನ್ ಪಾರ್ಕ್ ಉಳಿವಿಗಾಗಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ನವೆಂಬರ್ 03ರ ಭಾನುವಾರ Cubbon Park Walkers Association(CPWA) ಸಂಘಟನೆಯು ನಡೆಸುತ್ತಿರುವ ಕಬ್ಬನ್ ಪಾರ್ಕ್ ಉಳಿವಿಗಾಗಿ ಪ್ರತಿಭಟನೆ ನಡೆಸಿದೆ.
'ಪ್ರತ್ಯೇಕ ಬಸ್ ಪಥ' ಯೋಜನೆ ಯಶಸ್ಸಿಗೆ 6 ಸೂತ್ರಗಳನ್ನು ನೀಡಿದ ಎಎಪಿ
ಈ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್ ಸಹಾನೀ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್, ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಮತ್ತು ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದಾರೆ. ಸರ್ಕಾರವು ತನ್ನ ನಿರ್ಧಾರವನ್ನು ಕೈಬಿಡುವವರೆಗೂ ಆಮ್ ಆದ್ಮಿ ಪಕ್ಷವು ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟದಲ್ಲಿ ಮುನ್ನಡೆಯಲಿದೆ.
ದೆಹಲಿಯಲ್ಲಿ ಎಎಪಿ ಸರ್ಕಾರವು ಕಳೆದ 5 ವರ್ಷಗಳಲ್ಲಿ ಪರಿಸರ ರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ 19% ಹಸಿರು ಹೊದಿಕೆ(ಗ್ರೀನ್ ಕವರ್)ಯನ್ನು ಹೆಚ್ಚಿಸಿದೆ. ಅಲ್ಲದೆ ಮುಂಬೈನ ಆರೇ ಕಾಲೊನಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಮೆಟ್ರೋ ಡಿಪೋ ನಿರ್ಮಾಣಕ್ಕಾಗಿ 2141 ಮರಗಳನ್ನು ಕಡಿಯಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ಸ್ಥಳೀಯ ನಾಗರಿಕರ ಜೊತೆಗೂಡಿ ಹೋರಾಟ ನಡೆಸಿ, ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಮುಂಚೂಣಿ ಪಾತ್ರವಹಿಸಿದೆ.
ಈಗಾಗಲೇ ಕಬ್ಬನ್ ಪಾರ್ಕ್ ವಿಸ್ತೀರ್ಣ 300 ಎಕರೆ ಇಂದ 200 ಎಕರೆಗೆ ಕ್ಷೀಣಗೊಂಡಿದೆ.ಇದಕ್ಕೆ ಆಗಲೇ ತೀವ್ರ ಜನ ವಿರೋಧ ಕಂಡು ಬಂದಿದೆ. ಹೊಸ ಕಟ್ಟಡ ನಿರ್ಮಾಣದಿಂದ ಪಾರಂಪರಿಕ ಕಟ್ಟವನ್ನು ಕಳೆದುಕೊಳ್ಳಬೇಕಾಗುತ್ತದೆ ಹಾಗೂ ಅಲ್ಲಿರುವ ಪ್ರಾಣಿ, ಪಕ್ಷಿ ಹಾಗೂ ಉದ್ಯಾನವನಕ್ಕೆ ಕುತ್ತಾಗಲಿದೆ.#CubbonPark #HeritageBeku #Protest #AAP
— AAP Bengaluru (@AAPBangalore) November 3, 2019
ಪರಿಸರ ಸಂರಕ್ಷಣೆಯ ವಿಷಯದಲ್ಲಿ ರಾಜಿಯಿಲ್ಲದೆ ನೆಲ-ಜಲ ಸಂರಕ್ಷಣೆಗೆ ಆಮ್ ಆದ್ಮಿ ಪಕ್ಷವು ಕಠಿಬದ್ದವಾಗಿದೆ. ದೇಶದ ಯಾವುದೇ ಮೂಲೆಯಲ್ಲೂ ಅನವಶ್ಯಕವಾಗಿ ಪರಿಸರವನ್ನು ನಾಶ ಮಾಡುವುದರ ವಿರುದ್ಧ ಪರಿಸರ ರಕ್ಷಣೆಯ ಹೋರಾಟ ನಡೆಸಲು ಪಕ್ಷವು ಸಿದ್ಧವಾಗಿದೆ.
much before judicial ruling internal committee accorded permission ? to demolish old CEO building to fecilitate 7 storey bldng in CUBBON PARK A NATURAL HERITAGE !? High rise building in park certainly a hazel in preserving our natural heritage @#savecubbonpark #judiciary
— 0000 Mohanmurthy (@Momoo1964) November 3, 2019
ಬಿಬಿಎಂಪಿಗೆ
ಸರ್ಕಾರಿ
ಶಾಲೆ
ನಿರ್ವಹಣೆ
ಪಾಠ
ಮಾಡಲು
ಎಎಪಿ
ಸಜ್ಜು
ಬೆಂಗಳೂರಿನಲ್ಲೂ ಕಗ್ಗದಾಸಪುರ, ಗೊಟ್ಟಿಗೆರೆ, ಬೊಮ್ಮಸಂದ್ರ ಕೆರೆ ಉಳಿಸಿ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿ ಹೋರಾಟ ನಡೆಸಿದೆ. ಈಗ ಅಂತಹದ್ದೇ ಹೋರಾಟಕ್ಕೆ ಸಜ್ಜಾಗುವಂತಹ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಬೆಂಗಳೂರಿನ ಶ್ವಾಸಕೋಶಕ್ಕೆ ಸರ್ಕಾರ ಕೊಡಲಿ ಹಾಕಲು ಮುಂದಾಗಿದೆ. ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಕಬ್ಬನ್ ಪಾರ್ಕ್ ಗಳ ಸುತ್ತಮುತ್ತ ಯಾವುದೇ ಹೊಸ ಕಟ್ಟಡಗಳನ್ನು ಕಟ್ಟುವಂತಿಲ್ಲವೆಂದು ನಿಮಯಗಳಿವೆ. ಆದರೆ ಆ ನಿಯಮಗಳನ್ನೇ ಗಾಳಿಗೆ ತೂರಿ 'ವಕೀಲರ ಪರಿಷತ್ ಕಟ್ಟಡವನ್ನು' ಕೆಡವಿ, ಬಹು ಅಂತಸ್ಥಿನ ಹೊಸ ಕಟ್ಟಡವನ್ನು ಕಟ್ಟಲು ಅನುಮತಿ ನೀಡಲಾಗಿದೆ. ಹಾಗಾಗಿ ಪಾರಂಪರಿಕ ಕಟ್ಟಡ ಮತ್ತು ಬೆಂಗಳೂರಿನ ಬಹುಭಾಗಕ್ಕೆ ಜೀವವಾಯುವಾಗಿರುವ ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟ ನಡೆಸಲು ನಾಗರಿಕರು ಮುಂದಾಗಿದ್ದಾರೆ.
Protest against construction of new building in and around #CubbonPark @IndiaToday pic.twitter.com/SmkNAAaQsJ
— Nolan Pinto (@nolanentreeo) November 3, 2019