ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಾಯುಕ್ತರಿಗೆ ಚೂರಿ ಇರಿತ: ಆರೋಪಿ ತೇಜ್ ರಾಜ್ ವಿರುದ್ಧ FIR

By Mahesh
|
Google Oneindia Kannada News

Recommended Video

      ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚೂರಿ ಇರಿತ | Oneindia Kannada

      ಬೆಂಗಳೂರು, ಮಾರ್ಚ್ 07: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಬುಧವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿಯೊಬ್ಬರು ಚೂರಿಯಿಂದ ಇರಿದಿರುವ ಘಟನೆ ನಡೆದಿದೆ.

      ನ್ಯಾ.ವಿಶ್ವನಾಥ್ ಶೆಟ್ಟಿ ಪ್ರಾಣಾಪಾಯದಿಂದ ಪಾರು : ಸಿದ್ದರಾಮಯ್ಯನ್ಯಾ.ವಿಶ್ವನಾಥ್ ಶೆಟ್ಟಿ ಪ್ರಾಣಾಪಾಯದಿಂದ ಪಾರು : ಸಿದ್ದರಾಮಯ್ಯ

      ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ದುರ್ಘಟನೆ ನಡೆದಿದ್ದು, ಲೋಕಾಯುಕ್ತ ಕಚೇರಿಗೆ ದೂರು ನೀಡಲು ಬಂದಿದ್ದ ತೇಜಸ್ ಶರ್ಮಾ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಒಟ್ಟು ಮೂರು ಬಾರಿ ವಿಶ್ವನಾಥ್ ಶೆಟ್ಟಿ ಅವರಿಗೆ ಚುಚ್ಚಿ, ಪರಾರಿಯಾಗಲು ಯತ್ನಿಸಿದ್ದಾನೆ.

      ಲೋಕಾಯುಕ್ತರ ಮೇಲೆ ದಾಳಿ ಖಂಡಿಸಿದ ರಾಮಲಿಂಗಾ ರೆಡ್ಡಿ ಲೋಕಾಯುಕ್ತರ ಮೇಲೆ ದಾಳಿ ಖಂಡಿಸಿದ ರಾಮಲಿಂಗಾ ರೆಡ್ಡಿ

      A man stabs Justice Vishwanath Shetty Lokayukta court

      ನ್ಯಾ.ವಿಶ್ವನಾಥ್ ಶೆಟ್ಟಿ ಅವರನ್ನು ಸಮೀಪದ ಮಲ್ಯ ಆಸ್ಪತ್ರೆಗೆ ದಾಖಲಾಗಿದೆ. ಹೊಟ್ಟೆ, ಎದೆ ಭಾಗಕ್ಕೆ ತೀವ್ರ ಗಾಯವಾಗಿದೆ. ಆರಂಭದಲ್ಲಿ ವಿಶ್ವನಾಥ್ ಶೆಟ್ಟಿ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು. ನಂತರ, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸದ್ಯದ ಮಾಹಿತಿ ಸಿಕ್ಕಿದೆ.

      ನ್ಯಾ.ವಿಶ್ವನಾಥ್ ಶೆಟ್ಟಿ ವ್ಯಕ್ತಿಚಿತ್ರನ್ಯಾ.ವಿಶ್ವನಾಥ್ ಶೆಟ್ಟಿ ವ್ಯಕ್ತಿಚಿತ್ರ

      A man stabs Justice Vishwanath Shetty Lokayukta court

      Newest FirstOldest First
      7:16 PM, 7 Mar

      ಸಿದ್ದರಾಮಯ್ಯ ಅವರಿಂದ ಪ್ರತಿಕ್ರಿಯೆ:
      7:14 PM, 7 Mar

      ಸಂಸದ ಅನಂತ್ ಕುಮಾರ್ ಅವರಿಂದ ಪ್ರತಿಕ್ರಿಯೆ
      7:03 PM, 7 Mar

      ಆರೋಪಿ ತೇಜ್ ರಾಜ್ ವಿರುದ್ಧ ಐಪಿಸಿ ಸೆಕ್ಷನ್ 307, 341 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲು
      6:51 PM, 7 Mar

      ತುಮಕೂರು ನಗರದ ಬಿ ಎಮ್ ತೋಟದಲ್ಲಿ ಬಾಡಿಗೆ ಇದ್ದ ಆರೋಪಿ ತೇಜರಾಜ. ಕಳೆದ ಎರಡು ತಿಂಗಳಿನಿಂದ ಕೃಷ್ಣಪ್ಪ ಎಂಬುವರ ಮನೆಯಲ್ಲಿ ಬಾಡಿಗೆ ಇದ್ದ ಆರೋಪಿ. ಹೊಸ ಬಡಾವಣೆ ಪೊಲೀಸರಿಂದ ತಪಾಸಣೆ‌
      5:26 PM, 7 Mar

      33 ವರ್ಷದ ವ್ಯಕ್ತಿ, ದೂರು ನೀಡಲು ಬಂದಿದ್ದ, ಚಾಕುವಿನಿಂದ ಇರಿದಿದ್ದಾನೆ. ನಂತರ ನ್ಯಾಯಮೂರ್ತಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಹಿಂದೆ ತೇಜ್ ರಾಜ್ ಶರ್ಮ ನಾಲ್ಕು ಬಾರಿ ಲೋಕಾಯುಕ್ತ ಕಚೇರಿಗೆ ಬಂದಿದ್ದಾನೆ. ಕಳೆದ ನವೆಂಬರ್ ನಲ್ಲಿ ಈತ ನೀಡಿದ್ದ ಕೆಲವು ಅರ್ಜಿಗಳು ಕೋರ್ಟಿನಲ್ಲಿ ತಿರಸ್ಕೃತಗೊಂಡಿದೆ. ಡಿಸಿಪಿ ಸೆಂಥಿಲ್, ಚಂದ್ರಗುಪ್ತ ಅವರ ತಂಡ ತನಿಖೆ ನಡೆಸುತ್ತಿದ್ದಾರೆ. ಐಪಿಸಿ 307 ಕೇಸ್ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದರು.
      3:52 PM, 7 Mar

      ಸದಾನಂದ ಗೌಡ : ವಿಶ್ವನಾಥ್ ಶೆಟ್ಟಿ ಅವರಿಗಾಗಿ ಪ್ರಾರ್ಥಿಸೋಣ
      3:45 PM, 7 Mar

      ಚೂರಿ ಇರಿತ ಕೇಸು: ತನಿಖೆಗೆ 3 ಸದಸ್ಯರ FSL ತಂಡ ರಚಿಸಲಾಗಿದೆ. ಲೋಕಾಯುಕ್ತ ಕಚೇರಿಗೆ ಆಗಮಿಸಿರುವ FSL ತಂಡದಿಂದ ತನಿಖೆ ಆರಂಭಗೊಂಡಿದೆ
      Advertisement
      3:36 PM, 7 Mar

      ಆರೋಪಿಯ ಹೆಸರು ತೇಜಸ್ ಶರ್ಮಾ ಅಲ್ಲ, ತೇಜರಾಜ್ ಶರ್ಮಾ, ತುಮಕೂರಿನಲ್ಲಿ ಸೋಮೇಶ್ವರ ಬಡಾವಣೆಯ ನಿವಾಸಿ
      3:32 PM, 7 Mar

      ಒಂದಲ್ಲ, ಎರಡಲ್ಲ, ಮುರ್ನಾಲ್ಕು ಬಾರಿ ಇರಿತವಾಗಿರುವ ಮಾಹಿತಿ ಲಭ್ಯವಾಗಿದೆ. ವಿಶ್ವನಾಥ್ ಶೆಟ್ಟಿ ಅವರ ದೇಹದ ಸ್ಕ್ಯಾನಿಂಗ್ ಮುಗಿದಿದ್ದು, ಆಪರೇಷನ್ ಶುರುವಾಗಿದೆ.
      3:19 PM, 7 Mar

      ಕೊಲೆ ಮಾಡಲು ಯತ್ನ ಮಾಡಿರುವುದು ಕಂಡು ಬಂದಿದೆ. ಅವನನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ಮಾಡ್ತಾರೆ. ಪೊಲೀಸರಿಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ. ಡಾಕ್ಟರ್ ಗಳ ಜತೆ ಮಾತನಾಡಿದೆ. ಮೇಲ್ನೋಟಕ್ಕೆ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ. ಘಟನೆ ನಡೆದಾಗ ಗನ್ ಮ್ಯಾನ್ ಹೊರಗಡೆ ಇದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರು ಮಲ್ಯ ಆಸ್ಪತ್ರೆಯ ಬಳಿ ಪ್ರತಿಕ್ರಿಯಿಸಿದ್ದಾರೆ
      3:16 PM, 7 Mar

      ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಹಲ್ಲೆ ನಡೆದಿರುವುದು ದುರಾದೃಷ್ಟಕರ : ನಿವೃತ್ತ ನ್ಯಾ. ವೆಂಕಟಾಚಲ ಅವರಿಂದ ಪ್ರತಿಕ್ರಿಯೆ.
      3:16 PM, 7 Mar

      ಹೊಟ್ಟೆ ಭಾಗಕ್ಕೆ ಆಗಿರುವ ಗಾಯದ ಪ್ರಮಾಣ ಪರೀಕ್ಷೆಗಾಗಿ ಸಿಟಿ ಸ್ಕ್ಯಾನ್ ಚಿಕಿತ್ಸೆ
      Advertisement
      3:10 PM, 7 Mar

      ಸಿಎಂ ನೇತೃತ್ವದ ಸಭೆಯಲ್ಲಿ ಸಚಿವರಾದ ಕೆ.ಜೆ ಜಾರ್ಜ್, ಎಂಬಿ ಪಾಟೀಲ್, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಉಪಸ್ಥಿತಿ
      3:08 PM, 7 Mar

      ಲೋಕಾಯುಕ್ತರಿಗೆ ಚೂರಿ ಇರಿತ : ಮಲ್ಯ ಆಸ್ಪತ್ರೆಯಲ್ಲಿ ಸಿಎಂ ಮೀಟಿಂಗ್
      3:08 PM, 7 Mar

      ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಹಾಳಾಗಿರುವುದರಿಂದ ಈತನ ಬಳಿ ಇದ್ದ ಚಾಕುವನ್ನು ಡಿಕ್ಟೇಟ್ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.
      3:08 PM, 7 Mar

      ಮೊದಲಿಗೆ ಕೈಗೆ ಇರಿದ ತೇಜಸ್ ನಂತರ ಹೊಟ್ಟೆ, ಎದೆಗೆ ಚುಚ್ಚಿದ್ದಾನೆ.
      3:08 PM, 7 Mar

      ಲೋಕಾಯುಕ್ತ ಕಚೇರಿಗೆ ಬಂದು ಸಂದರ್ಶನಕ್ಕಾಗಿ ಸಮಯ ನಿಗದಿ ಪಡಿಸಿಕೊಂಡಿದ್ದ ತೇಜಸ್ ಅವರು ಊಟದ ವೇಳೆ ಕಚೇರಿ ನುಗ್ಗಿದ ತೇಜಸ್, ಲೋಕಾಯುಕ್ತರ ಮೇಲೆ ಚಾಕುವಿನಿಂದ ಇರಿದಿದ್ದಾನೆ.
      3:07 PM, 7 Mar

      ತುಮಕೂರು ಮೂಲದ ತೇಜಸ್ ಶರ್ಮಾ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

      ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ

      English summary
      The Lokayukta of Karnataka, P Vishwanath Shetty was stabbed at his office in Bengaluru. He has been admitted in a serious condition at the Mallya hospital.Accused is identified as Thejesh Sharma who was supposed to be appear before the court today for a case hearing.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X