ಎಂಜಲು ಉಗುಳುತ್ತಾ ತೆರಳಿದ ಅನಾಮಿಕ: ಕೊರೊನಾ ಆತಂಕ
ಬೆಂಗಳೂರು, ಏಪ್ರಿಲ್ 4: ಅನಾಮಿಕನೊಬ್ಬ ಎಂಜಲು ಉಗುಳಿದ ವದಂತಿಯಿಂದ ದೊಡ್ಡಬಿದಿರಕಲ್ಲು ಪ್ರದೇಶದಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೀಣ್ಯ ಠಾಣೆ ಪೊಲೀಸರು , ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ದೊಡ್ಡಬಿದಿರಕಲ್ಲು ಪ್ರದೇಶದಲ್ಲಿ ಓಡಾಡಿದ್ದ, ಮನೆ ಗೇಟ್ ಹಾಕಿದ್ದ ಕಾರಣ ತಮಟೆ ಬಡಿಯುತ್ತಾ ವಾಪಸ್ ಆಗುತ್ತಾನೆ.
ಸಿಸಿಟಿವಿ ದೃಶ್ಯವೊಂದರಲ್ಲಿ ಆತ ಎಂಜಲು ಉಗುಳುವುದು ಇಲ್ಲ. ಸುಮ್ಮನೆ ಈ ಬಗ್ಗೆ ವದಂತಿ ಹಬ್ಬಿಸಲಾಗಿದೆ.
ಆತ ಭಿಕ್ಷುಕ ಎಂಬುದು ತಿಳಿದುಬಂದಿದೆ. ಇತರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಆತ ಎಂಜಲು ಉಗಿದಿಲ್ಲ ಎಂಬುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್ಟಿ ಸೋಮಶೇಖರ್ ಈ ಕುರಿತು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ.
ಮಫ್ತಿಯಲ್ಲಿಯೂ ರಾತ್ರಿ ವೇಳೆ ಪೊಲೀಸರಿಗೆ ಗಸ್ತು ತಿರುಗುವಂತೆ ತಿಳಿಸಿದ್ದೇನೆ. ಯಾರಾದರೂ ಸುಮ್ಮನೆ ಆತಂಕ ಸೃಷ್ಟಿಸುವ ಕೆಲಸಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.