ನೀರಿನ ಮಹತ್ವ ಸಾರಲು ವಾಕಥಾನ್ ಏರ್ಪಡಿಸಿದ ಎಂಟರ ಬಾಲೆ
ಬೆಂಗಳೂರು, ಮಾರ್ಚ್ 21: ವಿಶ್ವ ಜಲದಿನದ ಅಂಗವಾಗಿ ನೇಚರ್ ಫಾರ್ ವಾಟರ್ ಘೋಷವಾಖ್ಯದೊಂದಿಗೆ ಮಾರ್ಚ್ 23ರಂದು ವಾಕಥಾನ್ ನಡೆಯಲಿದೆ.
ಈ ವಾಕಥಾನ್ ನ ವಿಶೇಷತೆಯೆಂದರೆ ಎಂಟು ವರ್ಷದ ಬಾಲಕಿ ಮಾನ್ಯ ಹರ್ಷಾ ಈ ವಾಕಥಾನ್ ಆಯೋಜನೆ ಮಾಡಿದ್ದಾಳೆ, ವಾಕಥಾನ್ ಪುಟ್ಟೇನಹಳ್ಳಿ ಕೆರೆಯಿಂದ ಜೆಪಿನಗರ 5ನೇ ಹಂತದವರೆಗೆ ನಡೆಸಲಾಗುತ್ತದೆ. ವಾಕಥನ್ ಮಧ್ಯದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಈ ವಾಕಥಾನ್ ಗೆ ಸಾಕಷ್ಟು ಮಕ್ಕಳು ಕೈಜೋಡಿಸಿದ್ದಾರೆ. ಜಗತ್ತು 21ನೇ ಶತಮಾನದಲ್ಲಿಯೂ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ನೀರು. ಮನುಷ್ಯ ಮತ್ತು ಸಕಲ ಜೀವರಾಶಿಗಳು ನೀರಿನ ಬಳಕೆಗಾಗಿ ಪರಿತಪಿಸದ ದಿನಗಳೇ ಇಲ್ಲ. ಈ ನಿಟ್ಟಿನಲ್ಲಿ ಮಾ21 ರಂದು ನೀರಿನ ಕುರಿತಾಗಿ ಜಾಗೃತಿ ಮೂಡಿಸಲೆಂದೇ ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಮತ್ತೊಂದು ವಿಶ್ವ ಜಲ ದಿನ ಬಂದು ಹೋಗಿದೆ.
ನೀರಿನ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡಡೆಯುತ್ತಿದೆ. ಇದೇ ರೀತಿ ಬೆಂಗಳೂರಿನಲ್ಲೂ ನೀರಿನ ಸಂರಕ್ಷಣೆ ಕುರಿತಾಗಿ ಮಾ.೨೩ರಂದು ಪುಟ್ಟೇನಹಳ್ಳಿ ಕೆರೆಯಿಂದ ಜೆಪಿನಗರ ಐದನೇ ಹಂತದವರೆಗೆ ವಾಕಥಾನ್ ನಡೆಯಲಿದೆ.