ಐತಿಹಾಸಿಕ ರಾಗೀಗುಡ್ಡ ಆಂಜನೇಯ ದೇವಾಲಯದಲ್ಲಿ ಡಿ. 4ರಿಂದ 51ನೇ ಹನುಮಜ್ಜಯಂತಿ ಸಂಭ್ರಮ
ಬೆಂಗಳೂರು, ಡಿ 3: ನಗರದ ಜಯನಗರ ಒಂಬತ್ತನೇ ಬಡಾವಣೆಯಲ್ಲಿರುವ ಪುರಾಣಪ್ರಸಿದ್ದ ರಾಗೀಗುಡ್ಡ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ, ಹನ್ನೆರಡು ದಿನಗಳ 51ನೇ ಹನುಮಜ್ಜಯಂತಿ - 2019 ಉತ್ಸವ, ಬುಧವಾರದಿಂದ (ಡಿ 4) ಆರಂಭಗೊಳ್ಳಲಿದೆ.
ಕಳೆದ ಸುಮಾರು ಐದು ದಶಕಗಳಿಂದ, ಭಗವಂತನ ಸೇವೆಯ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಕೆಲಸಗಳ ಮೂಲಕ ರಾಗೀಗುಡ್ಡ ದೇವಾಲಯ ಮನೆಮಾತಾಗಿದೆ.
ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಡಿಸೆಂಬರ್ 4ರಿಂದ 15ರವರೆಗೆ, ಹನ್ನೆರಡು ದಿನಗಳ ಕಾಲ, ಹನುಮಜ್ಜಯಂತಿ ಉತ್ಸವವನ್ನು ವೈಭವ, ಭಕ್ರಿ ಶ್ರದ್ದಾಪೂರ್ವಕವಾಗಿ ಆಚರಿಸುತ್ತದೆ.
ಜಯನಗರಕ್ಕೆ ಮತ್ತೊಂದು ಗರಿ; ಪ್ರಕೃತಿ ವನ ಲೋಕಾರ್ಪಣೆ
ಕೆ.ಆರ್.ನಗರದ ಯಡತೊರೆ ಯೋಗಾನಂದೇಶ್ವರ ಮಠದ ಶಂಕರಭಾರತಿ ಶ್ರೀಗಳು, ಹನುಮಜ್ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳು, ವಿದ್ವಾಂಸರಿಗೆ ಸನ್ಮಾನವನ್ನು ಮಾಡಿ, ಆಶೀರ್ವಚನ ನೀಡಲಿದ್ದಾರೆ. ಪ್ರಮುಖ ಕಾರ್ಯಕ್ರಮಗಳ ವಿವರ ಇಂತಿದೆ:
09.12.2019
ಹನುಮಜ್ಜಯಂತಿ
ಪ್ರಯುಕ್ತ,
ಬೆಳಗ್ಗೆ
9ಗಂಟೆಗೆ,
ಮಧು
ಅಭಿಷೇಕ,
ಪವಮಾನ
ಹೋಮ,
ಆಂಜನೇಯ
ಲಕ್ಷಾರ್ಚನೆ
ಸಂಜೆ
6.30ಕ್ಕೆ
ದಾಸವಾಣಿ
ಸಾಂಸ್ಕೃತಿಕ
ಕಾರ್ಯಕ್ರಮ.
10.12.2019
ಬೆಳಗ್ಗೆ
9ಗಂಟೆಗೆ,
ಫಲಾಭಿಷೇಕ,
ರಾಜರಾಜೇಶ್ವರಿ
ಹೋಮ,
ಲಲಿತಾ
ಸಹಸ್ರನಾಮ
ಹೋಮ
ಸಂಜೆ
4.30ಕ್ಕೆ
ಲಲಿತಾ
ಸಹಸ್ರನಾಮ
ಕುಂಕುಮಾರ್ಚನೆ.
15.12.2019
ಬೆಳಗ್ಗೆ
9ಗಂಟೆಗೆ,
ಶತರುದ್ರ
ಕ್ಷೀರಾಭಿಷೇಕ,
ಚಂಡಿಕಾ
ಹೋಮ,
ವಜ್ರ
ಕಿರೀಟ
ಸಹಿತ
ವಜ್ರ
ಕವಚ
ಧಾರಣೆ
ಸಂಜೆ
6.30ಕ್ಕೆ
ಸಂಕಷ್ಟಹರ
ಗಣಪತಿ
ವ್ರತ