ಕರ್ನಾಟಕದಲ್ಲಿ 49 ತಾಲೂಕುಗಳು ಬರ ಪೀಡಿತ; ಆರ್ ಅಶೋಕ್
ಬೆಂಗಳೂರು, ಏಪ್ರಿಲ್ 30: ರಾಜ್ಯದಲ್ಲಿ 49 ತಾಲೂಕುಗಳು ಬರ ಪೀಡಿತ ತಾಲೂಕುಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ 49 ತಾಲ್ಲೂಕುಗಳನ್ನು ಇನ್ನೂ ಒಂದು ತಿಂಗಳು ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಇನ್ನೂ ಒಂದು ತಿಂಗಳು ಬರ ಪೀಡಿತ ತಾಲ್ಲೂಕು ಮುಂದುವರೆಯುತ್ತೆ . ಈ ಪ್ರದೇಶದಲ್ಲಿ ಕುಡಿಯುವ ನೀರು ಸೇರಿದಂತೆ ಕೆಲವು ಸಮಸ್ಯೆ ಇದೆ ಎಂದರು.
ಬೆಂಗಳೂರಿನಲ್ಲಿ ಕೂಡ ಮಳೆ ಹೆಚ್ಚಾಗಿದೆ. ಮಳೆಗೆ ಸಂಬಂಧಿಸಿದ ನಷ್ಟ ಪರಿಹಾರಕ್ಕೆ ಟಾಸ್ಕ್ ಫೋರ್ಸ್ ಮಾಡುವ ದೃಷ್ಟಿ ಇದೆ. ಸಬ್ ರಿಜಿಸ್ಟರ್ ಆಫೀಸ್ ಗಳನ್ನು ರಾಜ್ಯಾದ್ಯಂತ ತೆರೆದಿದ್ದೇವೆ. ಕಚೇರಿಯಲ್ಲಿ ಪ್ರತಿ ಅರ್ಧ ಗಂಟೆಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಬ್ ರಿಜಿಸ್ಟರ್ ಆಫೀಸ್ ಗೆ ಕರೆ ಮಾಡಿ ನಾವು ಬರುತ್ತಿದ್ದೇವೆ ಎಂದು ಹೇಳಿದ್ರೆ ಪೊಲೀಸ್ ವಾಟ್ಸ್ ಆಪ್ ನಲ್ಲಿ ಪಾಸ್ ಕಳಿಸುತ್ತಾರೆ. ಅದನ್ನು ತೆಗೆದುಕೊಂಡು ರಿಜಿಸ್ಟರ್ ಆಫೀಸ್ ಗೆ ಹೋಗಬಹುದು ಎಂದು ತಿಳಿಸಿದರು.