ಬಿಡಿಎ ಗೋಲ್ಮಾಲ್: ಉಪ ಕಾರ್ಯದರ್ಶಿ ವಿರುದ್ಧ ಆರೋಪ
ಬೆಂಗಳೂರು, ಮೇ 13: ಬಿಡಿಎಯಲ್ಲಿ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 35 ನಿವೇಶನಗಳ ಖಾತಾವನ್ನು ತಡೆಹಿಡಿಯಲಾಗಿದೆ.
ಅಕ್ರಮ ಸೈಟು ಹಂಚಿಕೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಉಪ ಕಾರ್ಯದರ್ಶಿ-4 ಎಚ್ಎಸ್ ಸತೀಶ್ ಬಾಬು ನೋಟಿಸ್ಗೆ ಸಮಜಾಯಿಷಿ ನೀಡಿಲ್ಲ ಹಾಗಾಗಿ ಅಷ್ಟೂ ಸೈಟ್ಗಳ ಖಾತಾಗಳಿಗೆ ತಡೆ ಹಿಡಿಯಲಾಗಿದೆ.
ಪೆರಿಫೆರಲ್ ರಿಂಗ್ ರಸ್ತೆ ನೈಸ್ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು
ಟ್ರಿನಿಟಿ ಸಂಘಕ್ಕೆ ಅರ್ಕಾವತಿ ಬಡಾವಣೆಯಲ್ಲಿ ನೀಡಿರುವ ಬದಲಿ ಸೈಟ್ಗಳಿಗೆ ಕಾನೂನು ಮಾನ್ಯತೆ ಲಭ್ಯವಾಗಿಲ್ಲ. ಹೈಕೋರ್ಟ್ ಆದೇಶವಿದ್ದರೂ ಕೂಡ ಹಂಚಿಕೆ ವೇಳೆ ನಿಯಮಾವಳಿಗಳನ್ನು ಪಾಲಿಸಿಲ್ಲ.
ಸರ್ಕಾರದ ಗಮನಕ್ಕೆ ತರದೆ ಅವರಿಗೆ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಲು ಸತೀಶ್ ಬಾಬುಗೆ ಅಧಿಕಾರ ನೀಡಿರಲಿಲ್ಲ. ಈ ಮಧ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ತನಿಖೆಯನ್ನು ಪ್ರಾಧಿಕಾರದ ಎಸ್ಪಿ ವಹಿಸಲಾಗಿದೆ.
35 ಸೈಟ್ಗಳನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ವೇಳೆ ಹಂಚಿಕೆ ಮಾಡಲಾಗಿದೆ. ಜೊತೆಗೆ ಅಷ್ಟೂ ಸೈಟ್ಗಳನ್ನು ಸಂಘದ ಸದಸ್ಯರಿಗೆ ಓಂದಣಿ ಮಾಡಿಕೊಡಲಾಗಿದೆ.
ಬಿಡಿಎ ಸೂಪರಿಂಟೆಂಡೆಂಟ್ ಕೆವಿ ರವಿಶಂಕರ್ ಉಪ ಕಾರ್ಯದರ್ಶಿ ಸತೀಶ್ ಬಾಬು ಮೇಲೆ ಆರೋಪ ಹೊರಿಸಿದ್ದಾರೆ.
ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ
ಪ್ರತಿ ಚದರ ಅಡಿಗೆ ಕೇವಲ 59 ರೂ ಅಭಿವೃದ್ಧಿ ಶುಲ್ಕ ಪಡೆದಿರುವುದರಿಂದ ಪ್ರಾಧಿಕಾರಕ್ಕೆ ನಷ್ಟವಾಗಿದೆ. ಆರೋಪಕ್ಕೆ ಗುರಿಯಾಗಿರುವ ಸತೀಶ್ ಬಾಬು ನಿರ್ವಹಿಸುತ್ತಿದ್ದ ಹುದ್ದೆಯನ್ನು ನವೀನ್ ಜೋಸೆಫ್ಗೆ ವಹಿಸಿಕೊಡಲಾಗಿದೆ.