ಬೆಂಗಳೂರಲ್ಲಿ ಮಳೆ, 31 ಮರಗಳು ಧರೆಗೆ, 1 ಸಾವು
ಬೆಂಗಳೂರು, ಏಪ್ರಿಲ್ 17 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಜನರು ಸಂತಸಗೊಂಡಿದ್ದಾರೆ. ಮಳೆ, ಗಾಳಿಯಿಂದಾಗಿ ನಷ್ಟವೂ ಸಂಭವಿಸಿದೆ. ಬೈಕ್ ಮೇಲೆ ಮರ ಬಿದ್ದು, ಯುವಕನೊಬ್ಬ ಮೃತಪಟ್ಟಿದ್ದಾನೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬುಧವಾರ ಸಂಜೆ ಬೆಂಗಳೂರಿನಲ್ಲಿ ಅಲಿಕಲ್ಲು ಸಹಿತ ಮಳೆಯಾಗಿದೆ. ಗುಡುಗು, ಗಾಳಿಯ ಆರ್ಭಟವೂ ಜೋರಾಗಿತ್ತು. ಲುಂಬಿನಿ ಗಾರ್ಡನ್ನಲ್ಲಿ ಬೈಕ್ ಮೇಲೆ ಮರ ಬಿದ್ದ ಕಾರಣ ಕಿರಣ್ (27) ಎಂಬ ಯುವಕ ಸಾವನ್ನಪ್ಪಿದ್ದಾನೆ.
ಜಯನಗರ, ಬಾಣಸವಾಡಿ, ಲುಂಬಿನಿ ಗಾರ್ಡನ್, ಆರ್.ಟಿ.ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ 31 ಮರಗಳು ಬಿದ್ದಿವೆ. ಲೋಕಸಭಾ ಚುನಾವಣಾ ಕಾರ್ಯಕ್ಕೆ ಹೊರಟಿದ್ದ ಸಿಬ್ಬಂದಿಗಳು ಮಳೆಯಿಂದಾಗಿ ತೊಂದರೆಗೆ ಸಿಲುಕಿದರು.
ಶಾಂತಿನಗರ, ಪುಲಿಕೇಶಿ ನಗರ, ಯಲಹಂಕ, ಬಾಣಸವಾಡಿ, ಜೆ.ಸಿ.ನಗರ, ಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದವು. ಇನ್ನೂ ಎರಡು ದಿನ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ
ಬೆಂಗಳೂರಿನಲ್ಲಿ ಗುರುವಾರ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮಳೆ ಬಂದಿದ್ದರಿಂದ ಚುನಾವಣಾ ಸಿಬ್ಬಂದಿಗಳು ಪರದಾಡಿದರು. ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಿಬ್ಬಂದಿಗಳು ಮತಗಟ್ಟೆ ತಲುಪುವುದು ವಿಳಂಬವಾಗಲಿದೆ.