ಬೆಂಗಳೂರಿನಲ್ಲಿ ಬಿಸಿಯೂಟ ಸೇವಿಸಿ 150 ಮಕ್ಕಳು ಅಸ್ವಸ್ಥ
ಬೆಂಗಳೂರು, ಸೆ. 19 : ಕಾವಲ್ ಬೈರಸಂದ್ರದಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಬಿಸಿಯೂಟ ಸೇವಿಸಿದ 150 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಎಲ್ಲಾ ಮಕ್ಕಳನ್ನು ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ
ಮಧ್ಯಾಹ್ನ
ಡಿ.ಜೆ.ಹಳ್ಳಿ
ಸಮೀಪದಲ್ಲಿರುವ
ಸರ್ಕಾರಿ
ಉರ್ದು
ಶಾಲೆಯಲ್ಲಿ
ಮಕ್ಕಳು
ಬಿಸಿಯೂಟ
ಸೇವಿಸಿದ
ನಂತರ
ಅಸ್ವಸ್ಥಗೊಂಡರು.
ತಕ್ಷಣ
ಅವರನ್ನು
ಅಂಬೇಡ್ಕರ್
ಆಸ್ಪತ್ರೆಗೆ
ದಾಖಲು
ಮಾಡಲಾಯಿತು.
ಊಟದ
ನಂತರ
ಸುಮಾರು
150
ಮಕ್ಕಳು
ವಾಂತಿ
ಮಾಡಿಕೊಳ್ಳಲು
ಆರಂಭಿಸಿದರು
ಎಂದು
ಸ್ಥಳೀಯರು
ಮಾಧ್ಯಮಗಳಿಗೆ
ಹೇಳಿದ್ದಾರೆ.
ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಮಾತುಕತೆ ನಡೆಸಿದರು. ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. [ಸರ್ಕಾರಿ ಕಾಲೇಜುಗಳಲ್ಲಿ 5ರೂ.ಗೆ ಬಿಸಿಯೂಟ]
ಇಸ್ಕಾನ್ ಸಂಸ್ಥೆ ಶಾಲೆಗೆ ಪ್ರತಿದಿನ ಬಿಸಿಯೂಟವನ್ನು ಪೂರೈಕೆ ಮಾಡುತ್ತಿತ್ತು ಎಂದು ಶಿಕ್ಷಕರು ಹೇಳಿದ್ದಾರೆ. ಊಟದಲ್ಲಿ ಹಲ್ಲಿ ಬಿದ್ದಿರುವುದರಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಮಕ್ಕಳ ಪೋಷಕರು ಆಸ್ಪತ್ರೆಗೆ ಆಗಮಿಸಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದು, ಕಿಟಕಿ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಬಿರಿಯಾನಿಗಾಗಿ ಕಿತ್ತಾಡಿ ಹೋಟೆಲ್ ಬಿಟ್ಟ ಧೋನಿ!]