ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ 15 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಕರ್ನಾಟಕದಲ್ಲಿ ಇಂದು ಹೊಸದಾಗಿ 15 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲೂ ಮಾಸ್ಕ್ ಗಳನ್ನು ಕಡ್ಡಾಯಗೊಳಿಸಲು ಎಎಪಿ ಮನವಿರಾಜ್ಯದಲ್ಲೂ ಮಾಸ್ಕ್ ಗಳನ್ನು ಕಡ್ಡಾಯಗೊಳಿಸಲು ಎಎಪಿ ಮನವಿ

ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಹದಿನೈದು ಪ್ರಕರಣಗಳ ಪೈಕಿ ಹುಬ್ಬಳಿ-ಧಾರವಾಡ 4, ಮಂಡ್ಯ 3, ಬೆಳಗಾವಿ 3, ಬೀದರ್‌ 2, ಬೆಂಗಳೂರು ನಗರ 1, ಬೆಂಗಳೂರು ಗ್ರಾಮಾಂತರ 1 ಹಾಗೂ ಬಾಗಲಕೋಟೆಯಲ್ಲಿ 1 ಕೇಸ್ ದೃಢವಾಗಿದೆ.

ಈ ಹದಿನೈದು ಪ್ರಕರಣ ಪೈಕಿ ಬಹುತೇಕ ಎಲ್ಲರೂ ಈ ಹಿಂದೆ ಕೊರೊನಾ ಸೋಂಕು ಪತ್ತೆಯಾಗಿರುವವರ ಜೊತೆ ಸಂಪರ್ಕದಲ್ಲಿದ್ದವರು. ಆದರೆ, ಬೆಂಗಳೂರು ನಗರದ ರೋಗಿಗೆ ದೆಹಲಿ ಪ್ರಯಾಣದ ಮಾಡಿರುವ ಹಿನ್ನೆಲೆ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ದಾಖಲಾಗಿರುವ ರೋಗಿಗೆ ಉಸಿರಾಟದ ತೊಂದರೆ ಇದೆ ಎಂದು ತಿಳಿದಿದೆ.

15 New COVID 19 Cases Reported In Karnataka On April 13th

ಇದುವರೆಗೂ 59 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ದೇವರು ಇದ್ದಾನೆಯೇ? ಯಾಕೆ ಕೊರೊನಾ ತೊಗಲಿಸುತ್ತಿಲ್ಲ: ಕಾಟ್ಜು ದೇವರು ಇದ್ದಾನೆಯೇ? ಯಾಕೆ ಕೊರೊನಾ ತೊಗಲಿಸುತ್ತಿಲ್ಲ: ಕಾಟ್ಜು

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ರಾಜ್ಯದಲ್ಲಿ ಇನ್ನು ಹೆಚ್ಚಿನ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 30ರ ತನಕ ಲಾಕ್‌ಡೌನ್‌ ವಿಸ್ತರಣೆಗೆ ಸರ್ಕಾರ ಮುಂದಾಗಿದೆ.

English summary
15 new coronavirus cases reported in karnataka April 13. Hubli-dharwad 4, mandya 3, bidar 2, bagalkot 1, belagavi 3, bengaluru rural 1, bengalaru city 1 case reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X