ಯಶಸ್ವಿಯಾಗಿ ಜರುಗಿದ 'ಸಿಟಿ ಟು ವಿಲೇಜ್' ವಾಕಥಾನ್
ಬೆಂಗಳೂರು, ಫೆಬ್ರವರಿ 24: ಗುರೂಜಿ ನಂದಕಿಶೋರ್ ತಿವಾರಿ ಸ್ಥಾಪಿಸಿದ ದರ್ಪಣ್ ಫೌಂಡೇಶನ್ ವತಿಯಿಂದ ಇತ್ತೀಚೆಗೆ ಗ್ರಾಮೀಣ ಶಾಲಾ ಮಕ್ಕಳ ಅಭಿವೃದ್ಧಿ ಹಾಗೂ ಸುಸ್ಥಿರ ಕೃಷಿ ಬಗ್ಗೆ 'ಸಿಟಿ ಟು ವಿಲೇಜ್' ವಾಕಥಾನ್ ಯಶಸ್ವಿಯಾಗಿ ಜರುಗಿತು.
ಶನಿವಾರ ಬೆಳಿಗ್ಗೆ ಬನ್ನೆರುಘಟ್ಟದಿಂದ ಆರಂಭವಾದ ಈ ವಾಕಥಾನ್ ಸಂಜೆ ತಮಿಳುನಾಡಿನ ದರ್ಪಣ್ ಫೌಂಡೇಶನ್ ಆಶ್ರಮವಿರುವ ಉರಿಗಂನಲ್ಲಿ ಅಂತ್ಯಗೊಂಡಿತು. 100 ಕಿಲೋ ಮೀಟರ್ನ ವಾಕಥಾನ್ ಇದಾಗಿತ್ತು.
ಈ ವೇಳೆ ದರ್ಪಣ್ ಆಶ್ರಮ ಅಭಿವೃದ್ಧಿಪಡಿಸಿದ 5 ಪದರಗಳ ನೈಸರ್ಗಿಕ ಕೃಷಿ ಮಾದರಿಯ ಬಗ್ಗೆ ಮತ್ತು ನೀರನ್ನು ಹೇಗೆ ಸಂರಕ್ಷಿಸಬೇಕು ಎಂದು ಡಾ.ಪ್ರಭಾಕರ್ ಅವರು ಮಾರ್ಗದಲ್ಲಿ ರೈತರಿಗೆ ಮಾಹಿತಿ ನೀಡಿದರು. ಗ್ರಾಮೀಣ ಜನರ ಕೌಶಲ್ಯ ಅಭಿವೃದ್ಧಿಗೆ ದರ್ಪಣ್ ಆಶ್ರಮ ಕೈಗೊಂಡ ಉಪಕ್ರಮಗಳ ಬಗ್ಗೆ ರೈತರು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಅನೇಕ ದರ್ಪಣ್ ಸ್ವಯಂಸೇವಕರು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಕಥಾನ್ನಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಶಾಲಾ ಮಕ್ಕಳು ಭಾಗವಹಿಸಿದ್ದರು. ೫೦ ಕ್ಕೂ ಹೆಚ್ಚು ದರ್ಪಣ್ ಸ್ವಯಂಸೇವಕರು ಭಾಗವಹಿಸಿದ್ದರು.