ಆಯುಷ್ ಮಂತ್ರಾಲಯದ ಬಗ್ಗೆ ಬಾಬಾ ರಾಮದೇವ್ ಅಸಮಾಧಾನ
ಬಳ್ಳಾರಿ, ಫೆಬ್ರವರಿ 04: ಬಳ್ಳಾರಿಯಲ್ಲಿ ಜಿಲ್ಲೆ ಪ್ರವಾಸದಲ್ಲಿರುವ ಯೋಗ ಗುರು ಬಾಬಾ ರಾಮದೇವ್ ಅವರು ಯೋಗದ ಮಹತ್ವ ಹಾಗೂ ಆಯುಷ್ ಸಚಿವಾಲಯದ ಬಗ್ಗೆ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ದೇಶದಲ್ಲಿ ಶಾಲಾ ಮಕ್ಕಳಿಗೆ ಯೋಗ ಕಡ್ಡಾಯವಾಗಬೇಕು ಅನ್ನೋದು ನನ್ನ ಕನಸು-ಎಲ್ಲಾ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸುದ್ದೇನೆ. ಯಾವ ಸರ್ಕಾರಗಳು ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.
ಕೇಂದ್ರ ಸರ್ಕಾರವು ಆಯುಷ್ ಮಂತ್ರಾಲಯ ಮಾಡಿದ್ದು ಹೆಸರಿಗಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನ ಬಲಪಡಿಸಲು ಪತಂಜಲಿ ಯೋಗ ಟ್ರಸ್ಟ್ ಉಚಿತ ವಾಗಿ ಸೇವೆ ನೀಡಲು ಸಿದ್ದ- ಇದಕ್ಕೆ ಅಧಿಕಾರ ಮತ್ತು ಹಣದ ಅವಶ್ಯಕತೆ ಇಲ್ಲ.
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಯೋಗ ಶಿಬಿರವನ್ನು ಯೋಗ ಗುರು ಬಾಬಾ ರಾಮ್ದೇವ್ ನಡೆಸಿಕೊಟ್ಟರು.
ಭಾನುವಾರ ಬೆಳಗ್ಗೆ 5ಗಂಟೆಗೆ ಶಿಬಿರಕ್ಕೆ ಬಾಬಾ ರಾಮ್ದೇವ್ ಅವರಿಂದ ಯೋಗ ಶಿಬಿರಕ್ಕೆ ಚಾಲನೆ ಸಿಕ್ಕಿತು. ಈ ಯೋಗ ಶಿಬಿರದಲ್ಲಿ ಮುಗಳಖೋಡ ಮಠದ ಸ್ವಾಮೀಜಿ, ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಯೋಗದ ಮಹತ್ವ ಕುರಿತು ಯೋಗ ಗುರೂಜಿ ಬಾಬಾ ರಾಮ್ ದೇವ್ ವಿವರಿಸಿದರು.