ಚಿತ್ರಗಳು : ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ದೀಪಾವಳಿ ಆಚರಣೆ
ಬಳ್ಳಾರಿ, ಅಕ್ಟೋಬರ್ 19 : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ದೀಪಾವಳಿ ಆಚರಣೆ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಬಳ್ಳಾರಿಗೆ ಮೂರು ದಿನಗಳ ಕಾಲ ಭೇಟಿ ನೀಡಲು ಅನುಮತಿ ನೀಡಿತ್ತು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಬಳ್ಳಾರಿಗೆ ಹೋಗದಂತೆ ಷರತ್ತು ವಿಧಿಸಿ, ಜಾಮೀನು ನೀಡಲಾಗಿತ್ತು.
ಬಳ್ಳಾರಿಯಲ್ಲಿ ವಿಜಯದಶಮಿ ಆಚರಿಸುವುದಕ್ಕೆ ರೆಡ್ಡಿಗೆ ಕೋರ್ಟ್ ಸಮ್ಮತಿ
ಆದ್ದರಿಂದ, ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಬಳ್ಳಾರಿಗೆ ಭೇಟಿ ನೀಡಿ ದೀಪಾವಳಿ ಆಚರಣೆ ಮಾಡಲು ಅನುಮತಿ ಕೇಳಿದ್ದರು. ಅಕ್ಟೋಬರ್ 19ರಿಂದ 21ರ ತನಕ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಕೋರ್ಟ್ ಅನುಮತಿ ನೀಡಿತ್ತು.
ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿಯ ಎರಡು ಕನಸು
'ನಾಡಿನ ಸಮಸ್ತ ಜನಾಂಗದ ಭಾಂದವರಿಗೆ ದೀಪಗಳ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು. ಮುಂಬರುವ ದಿನಗಳಲ್ಲಿ ನಾಡಿನ ಎಲ್ಲೆಡೆ ಸುಖ: ಶಾಂತಿ ಸಮೃದ್ಧಿ ನೆಲಸಲಿ ಸರ್ವರ ಬಾಳಿನಲ್ಲಿ ಅಂಧಕಾರ ದೂರವಾಗಿ ಪ್ರಕಾಶಿಸುವ ಬೆಳಕು ಪ್ರವೇಶವಾಗಲಿ ಎಲ್ಲರ ಬದುಕು ಬಂಗಾರವಾಗಲಿ ಎಂದು ಹೃದಯ ತುಂಬಿ ಶುಭ ಹಾರೈಸುತ್ತೇನೆ'.
'ಕಳೆದ 7 ವರ್ಷಗಳ ನಂತರ ನನ್ನ ಹುಟ್ಟೂರು ಬಳ್ಳಾರಿಯಲ್ಲಿ ನನ್ನ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹಬ್ಬದ ಆಚರಣೆ ಮಾಡಿಕೊಳ್ಳುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ' ಎಂದು ಫೇಸ್ಬುಕ್ ನಲ್ಲಿ ಬರೆದಿದ್ದಾರೆ.