ಕಾರು-ಬಸ್ ಮುಖಾ ಮುಖಿ ಡಿಕ್ಕಿ: ಐದು ಜನ ಧಾರುಣ ಸಾವು
ಬಳ್ಳಾರಿ, ಜೂನ್ 15: ಇಂಡಿಕಾ ಕಾರು ಮತ್ತು ಬಸ್ ಮುಖಾ ಮುಖಿ ಡಿಕ್ಕಿಯಾಗಿ ಐವರು ಭೀಕರವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೋಳೂರು ಕ್ರಾಸ್ ಬಳಿ ನಡೆದಿದೆ.
ಸಂಜೆ 4:35ಕ್ಕೆ ಸಿರಗುಪ್ಪ ಕಡೆಗೆ ತೆರಳುತ್ತಿದ್ದ ಬಸ್ ಬಳ್ಳಾರಿ ಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತರು ಮೂಲತಃ ದಾವಣಗೆರೆ ಜಿಲ್ಲೆಯವರು ಎನ್ನುವ ಮಾಹಿತಿ ತಿಳಿದುಬಂದಿದೆ.
ಬೆಂಗಳೂರು: ಸಿಗರೇಟಿಗೆ 15 ರೂ.ಕೊಡದಿದ್ದಕ್ಕೆ ಇಬ್ಬರ ಹತ್ಯೆ!
ಕಾರಿನಡಿ ಸಿಲುಕಿದ ದೇಹ ಹೊರ ತೆಗೆಯಲು ಸಾರ್ವಜನಿಕರು, ಪೊಲೀಸರು ಹರ ಸಾಹಸಪಡುತ್ತಿದ್ದು, ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿದ್ದಾರೆ. ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭೀಕರ ಕಾರು ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಾರ್ವಜನಿಕರು ಅಪಘಾತದ ದೃಶ್ಯ ನೋಡಿ ಬೆಚ್ಚಿ ಬಿದ್ದರು. ಕಾರಿನಡಿ ಸಿಲುಕಿರುವ ಮೃತ ದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಬಳ್ಳಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
Comments
English summary
Five persons were died in car accident near Koluru Cross in Bellary district. Died persons were originally from davangere district.
Story first published: Friday, June 15, 2018, 19:13 [IST]