ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಜನತೆಗೆ ಕೃತಜ್ಞತೆ ಸಲ್ಲಿಸಿದ ಸಚಿವ ಡಿ.ಕೆ.ಶಿವಕುಮಾರ್

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

Recommended Video

Bellary By-elections results 2018 : ಬಳ್ಳಾರಿ ಜನತೆಗೆ ಕೃತಜ್ಞತೆ ಸಲ್ಲಿಸಿದ ಡಿ ಕೆ ಶಿವಕುಮಾರ್

ಬಳ್ಳಾರಿ, ನವೆಂಬರ್.06: ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿರುವ ಬಳ್ಳಾರಿ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಈ ಗೆಲುವು ಬರೀ ಚುನಾವಣೆ ಗೆಲುವಲ್ಲ. ಬಳ್ಳಾರಿ ಜನರ ಸ್ವಾಭಿಮಾನದ ಗೆಲುವು. ಆತ್ಮಗೌರವದ ಗೆಲುವು. ಸರ್ವಾಧಿಕಾರಿ ಧೋರಣೆ ವಿರುದ್ಧದ ಗೆಲುವು. ಹದಿನಾಲ್ಕು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಪತಾಕೆ ಹಾರಿಸಿರುವ ಬಳ್ಳಾರಿ ಜನರ ವಿಶ್ವಾಸವನ್ನು ಇಮ್ಮಡಿಗೊಳಿಸುವ ರೀತಿಯಲ್ಲಿ ತಮ್ಮ ಪಕ್ಷದವರು ಅಹರ್ನಿಶಿ ಶ್ರಮಿಸುತ್ತೇವೆ.

ಬಳ್ಳಾರಿ LIVE: ಉಗ್ರಪ್ಪಗೆ ದಾಖಲೆ ಗೆಲುವು, ಅಧಿಕೃತ ಘೋಷಣೆ ಬಾಕಿಬಳ್ಳಾರಿ LIVE: ಉಗ್ರಪ್ಪಗೆ ದಾಖಲೆ ಗೆಲುವು, ಅಧಿಕೃತ ಘೋಷಣೆ ಬಾಕಿ

ಈ ಗೆಲುವಿನ ಮೂಲಕ ನೀವು ನಮ್ಮ ಮೇಲೆ ಋಣ ಹೊರಿಸಿದ್ದೀರಿ. ಜವಾಬ್ದಾರಿ ಹೆಚ್ಚಿಸಿದ್ದೀರಿ. ನಿಮ್ಮ ಸೇವೆ ಮೂಲಕ ಅದನ್ನು ತೀರಿಸುವ ಸಂಕಲ್ಪ ನಮ್ಮದು ಎಂದು ಡಿಕೆಶಿ ತಿಳಿಸಿದ್ದಾರೆ.

ಉಪಚುನಾವಣೆ ಫಲಿತಾಂಶ LIVE:ಲೋಕಸಭೆ ಚುನಾವಣೆ ಮುನ್ನ ಬಿಜೆಪಿಗೆ ಮುಖಭಂಗ!ಉಪಚುನಾವಣೆ ಫಲಿತಾಂಶ LIVE:ಲೋಕಸಭೆ ಚುನಾವಣೆ ಮುನ್ನ ಬಿಜೆಪಿಗೆ ಮುಖಭಂಗ!

DK Shivakumar thanked the Bellary people

ಉಗ್ರಪ್ಪನವರು ಬಳ್ಳಾರಿ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲಿದ್ದಾರೆ. ಇನ್ನೇನಿದ್ದರೂ ಬಳ್ಳಾರಿ ಕಟ್ಟುವ ಕೆಲಸ. ಅದನ್ನು ನಾವು, ನೀವೂ ಇಬ್ಬರೂ ಸೇರಿ ಮಾಡೋಣ. ತಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು ಎಂದು ಶುಭ ಹಾರೈಸಿದರು.

English summary
Congress candidate Ugrappa won in Bellary lok sabha by election 2018. Minister DK Shivakumar thanked the people for this reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X