ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಕುಮಾರ ಹೆಗಡೆ ಮಾತಿಗೆ ಬ್ರೇಕ್ ಬಿದ್ದಿದೆಯಾ?: ಹೀಗೊಂದು ಅನುಮಾನ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 8: ಕರ್ನಾಟಕ ಬಿಜೆಪಿಯ 'ಫೈರ್ ಬ್ರ್ಯಾಂಡ್', ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಣ್ಣಗಾಗಿದ್ದಾರಾ ಎಂಬ ಅನುಮಾನವನ್ನು ನಿಜ ಮಾಡುವಂಥ ಘಟನೆ ಇಲ್ಲಿ ಸೋಮವಾರ ನಡೆದಿದೆ. ಮಾಧ್ಯಮದವರ ಯಾವುದೇ ಪ್ರಶ್ನೆಗೆ ಉತ್ತರ ನೀಡದ ಅವರು, ಕೈ ಮುಗಿದು ಹೊರಟು ಹೋದರು.

ಅನಂತಕುಮಾರ್ ಹೆಗಡೆ ಕಾರು ತಡೆದು, ದಲಿತ ಸಂಘಟನೆಗಳಿಂದ ಕಪ್ಪು ಬಾವುಟಅನಂತಕುಮಾರ್ ಹೆಗಡೆ ಕಾರು ತಡೆದು, ದಲಿತ ಸಂಘಟನೆಗಳಿಂದ ಕಪ್ಪು ಬಾವುಟ

ಆದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಬಿಜೆಪಿಯು ಗೆಲುವನ್ನು ಸಾಧಿಸುತ್ತದೆ ಎಂದಷ್ಟೇ ಹೇಳಿದರು. ಆ ನಂತರ ಅವರು ಮಾತನಾಡಿದ್ದೇನೆಂದರೆ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತಷ್ಟೇ. ಒಟ್ಟಿನಲ್ಲಿ ಎಂದಿನ ತಮ್ಮ ಬೆಂಕಿಯುಗುಳುವ ಶೈಲಿಯ ಮಾತುಗಳಿಗೆ ಸ್ವಯಂ ನಿಯಂತ್ರಣ ಹೇರಿಕೊಂಡಂತೆ ಕಂಡುಬಂದರು.

Why central minister Anantakumar Hegde silent in Belagavi?

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಪಕ್ಷದ ವರಿಷ್ಠರಿಂದ ಸೂಚನೆ ಬಂದಿದೆ ಎಂಬುದು ಒಂದು ಮೂಲದ ಸುದ್ದಿಯಾದರೆ, ಸಂಸತ್ ನಲ್ಲಿ ಸಂವಿಧಾನದ ಕುರಿತಾದ ಹೇಳಿಕೆಗೆ ಕ್ಷಮೆ ಕೇಳುವಂತೆ ಸೂಚಿಸಿದ ನಂತರ ಸ್ವತಃ ಹೆಗಡೆ ಸ್ವಲ್ಪ ಮಟ್ಟಿಗೆ ಮೌನವಾಗಿದ್ದರು ಎಂಬುದು ಮತ್ತೊಂದು ಆಯಾಮ.

English summary
Central minister Anantakumar Hegde has not speak much in Belagavi. He does not speak to media on Monday and not look like in fire brand image. There is a lot of rumor about BJP high command instruction to him, not to give controversial statements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X