ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ

|
Google Oneindia Kannada News

ಬೆಂಗಳೂರು, ಸೆ.26: ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಅಪಹರಿಸಿ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಅಪಹೃತ ಆಂಧ್ರಪ್ರದೇಶದ ಬಾರ್ ಮಾಲೀಕ ಕರ್ನಾಟಕದಲ್ಲಿ ಪತ್ತೆ! ಅಪಹೃತ ಆಂಧ್ರಪ್ರದೇಶದ ಬಾರ್ ಮಾಲೀಕ ಕರ್ನಾಟಕದಲ್ಲಿ ಪತ್ತೆ!

ಇದೀಗ ಪತ್ನಿಯನ್ನು ಕಳೆದುಕೊಂಡ ಪತಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ, ಕೋಗಾಕ್ ತಾಲೂಕಿನ ಮಿಡಕನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಬಸವರಾಜ ಪತ್ನಿ ಕಳೆದುಕೊಂಡವರು. ಆತ ಸ್ನೇಹಿತ ರಮೇಶ್ ಹುಕ್ಕೇರಿ ಬಸವರಾಜ್ ಕೋನನ್ನವರ ಎಂಬಾತನ ಪತ್ನಿಯನ್ನು ಅಪಹರಿಸಿ ವಿವಾಹವಾಗಿದ್ದಾರೆ, ರಮೇಶ್ ಹುಕ್ಕೇರಿ , ಬಸವರಾಜ ಮತ್ತು ಈತನ ಪತ್ನಿ ಸವಿತಾ ಒಂದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಯುವತಿಯನ್ನು ಅಪಹರಿಸಿ ತರುವೆ : ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ ಯುವತಿಯನ್ನು ಅಪಹರಿಸಿ ತರುವೆ : ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ಈ ವೇಳೆ ರಮೇಶ್, ಬಸವರಾಜ ಮತ್ತು ಪತ್ನಿ ಜತೆ ಸ್ನೇಹ ಬೆಳೆಸಿದ್ದಾರೆ, ಈ ಸ್ನೇಹ ಮುಂದುವರೆದು ಹಣಕಾಸಿನ ಕೊಡು-ಕೊಳ್ಳುವಿಕೆಯೂ ನಡೆದಿದೆ. ಬಸವರಾಜ ಪತ್ನಿಗೆ ರಮೇಶ್ ಒಂದು ಮೊಬೈಲ್ ಕೊಡಿಸಿದ್ದ ಬಳಿಕ ಅದು ಬಸವರಾಜ್ ಗೆ ತಿಳಿದು ಅದನ್ನು ಒಡೆದು ಹಾಕಿದ್ದ ಹೀಗೆಯೇ ಮುಂದುವರೆದು ಬಸವರಾಜ ರಮೇಶ್ ಬಳಿ 500 ರೂ ಸಾಲ ಪಡೆದುಕೊಂಡಿದ್ದ ಅದನ್ನು ವಾಪಸ್ ನೀಡಿದ್ದಕ್ಕೆ ಅಪಹರಿಸಿ ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ.

To recover Rs500 hand loan,man kidnapped and married his friends wife

ಪೊಲೀಸರ ಬಳಿ ನಡೆದ ವಿಷಯ ಎಲ್ಲವನ್ನು ಹೇಳಿದ್ದಾನೆ.ಆದರೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ತನ್ನ ಹೆಂಡತಿ ಗರ್ಭಿಣಿಯಾಗಿದ್ದು ಆಕೆ ವಿಚ್ಛೇದನ ನೀಡದೆ ರಮೇಶನ ಜತೆ ಸಂಸಾರ ನಡೆಸುತ್ತಿದ್ದಾಳೆ ಎಂದು ದೂರಿದ್ದಾನೆ.

English summary
A man kidnapped and married his friend's wife just to recover Rs.500 hand loan from him. This incident was came to light in Belagavi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X