ಬೈಕ್ ಅಪಘಾತದಲ್ಲಿ ಬೆಳಗಾವಿ ಜೈನ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಾವು
ಬೆಳಗಾವಿ, ಜೂನ್.24: ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಖಾನಾಪೂರ ತಾಲೂಕಿನ ದೇಶನೂರ ಗ್ರಾಮದ ಬಳಿ ನಡೆದಿದೆ.
ಖಾನಾಪುರದಿಂದ ಬೆಳಗಾವಿಗೆ ಮೂವರು ವಿದ್ಯಾರ್ಥಿಗಳು ಬೈಕ್ ಮೇಲೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೃತರೆಲ್ಲರೂ ಬೆಳಗಾವಿಯ ಜೈನ್ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಅಂತ್ಯ ಸಂಸ್ಕಾರಕ್ಕೆಂದು ಹೊರಟವರು ದುರಂತ ಅಂತ್ಯಕಂಡರು!
ಬೆಳಗಾವಿ
ಗ್ರಾಮೀಣ
ಪೋಲಿಸ್
ಠಾಣೆ
ವ್ಯಾಪ್ತಿಯಲ್ಲಿ
ಪ್ರಕರಣ
ದಾಖಲಾಗಿದ್ದು,
ಸ್ಥಳಕ್ಕೆ
ಎಸಿಪಿ
ಬಾಲಚಂದ್ರ
ಭೇಟಿ
ನೀಡಿದ್ದಾರೆ.
ಕಾರಿನಲ್ಲಿದ್ದವರಿಗೆ
ಯಾವುದೇ
ಪ್ರಾಣಾಪಾಯ
ಆಗಿಲ್ಲ.
ಸದ್ಯದ
ಮಾಹಿತಿಯ
ಪ್ರಕಾರ,
ವೇಗದ
ಚಾಲನೆಯೇ
ಈ
ಅವಘಡಕ್ಕೆ
ಕಾರಣ
ಎನ್ನಲಾಗಿದೆ.
ನಿನ್ನೆಯಷ್ಟೇ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿತ್ತು.
ಯಂಟಗಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಹಾಸನ ಜಿಲ್ಲೆಯ ಹೊಳೆನರಸಿಪುರ ನಿವಾಸಿಗಳಾದ ಶ್ರೀಧರ್(24) ಮತ್ತು ಪುನೀತ್ (22) ಎಂದು ಗುರುತಿಸಲಾಗಿತ್ತು.
ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿತ್ತು.